Sunday, April 24, 2011

ಅಭಿಮಾನಿ ದೇವರುಗಳ ದೇವರು - ರಾಜಕುಮಾರಾ - Abhimani Devarugala Devaru - Rajkumar (2011)

ಅಭಿಮಾನಿ ದೇವರುಗಳ ದೇವರು

ದೇವರು ಯಾವಾಗಲು ಅಭೂತಪೂರ್ವ ಜೀವವನ್ನು ಒಮ್ಮೆ ಮಾತ್ರ ಸೃಷ್ಟಿ ಮಾಡುತ್ತಾನೆ..ಅಂತಹ ಒಂದು ಮುತ್ತು ನಮ್ಮ ರಾಜ್


ಚಿತ್ರ - ನನ್ನ ಸ್ನೇಹಿತ ವಿಕ್ರಂ ಕೃಪೆ

ರಾಜಕುಮಾರ್ ಒಂದು ದಂತಕಥೆ ಅನ್ನುವದಕ್ಕಿಂತ ಕಥೆಗಳ ದಾದಾ ಆಗಿ ಬಿಟ್ರು.  ಅವರಲ್ಲಿನ ಪ್ರತಿಭೆಯನ್ನು ಹೊರಗೆ ತೆಗೆಯಲು ಶ್ರಮಿಸಿದ ಎಲ್ಲ ತೆರೆಯ ಹಿಂದಿನ ದಾದಗಳಿಗೆ ಒಂದು ನಮಿಸುವ ಒಂದು ಸಣ್ಣ ಪ್ರಯತ್ನ. ಇದು ನನ್ನ ಆಯ್ಕೆ, ಇದರಲ್ಲಿ ಯಾವ ಭೇದ-ಭಾವ ಇಲ್ಲ, ನನ್ನ ಅನಿಸಿಕೆ, ನನ್ನ ಅಭಿಪ್ರಾಯ ಮಾತ್ರ ಅಷ್ಟೇ

ನಿರ್ದೇಶಕರು
೧. ಎಚ್. ಎಲ್. ಏನ್. ಸಿಂಹ - ಕನ್ನಡಾಂಬೆಯಾ ಸಾಗರದಲ್ಲಿ  ಹೆಕ್ಕಿ ತೆಗೆದ ಅನರ್ಘ್ಯ ರತ್ನವನ್ನು ಪರಿಚಯಿಸಿದ ಮಹನೀಯ 
ಬೇಡರಕಣ್ಣಪ್ಪ, ಅಬ್ಬಾ ಆ ಹುಡುಗಿ, ತೇಜಸ್ವಿನಿ

೨. ಹುಣುಸೂರು ಕೃಷ್ಣಮೂರ್ತಿ : ಇವರು ರಾಜನ ಎಲ್ಲ ಮುಖಗಳನ್ನು ಪರಿಚಯಿಸಿದ ಪುಣ್ಯಾತ್ಮ. ಸಾಮಾಜಿಕ, ಪೌರಾಣಿಕ, ಐತಿಹಾಸಿಕ, ಭಕ್ತಿಪ್ರಧಾನ, ಸಾಹಸಮಯ ಎಲ್ಲಾ ಪಾತ್ರಗಳಲ್ಲಿ ರಾಜನ ಪ್ರತಿಭೆಯನ್ನ ಅನಾವರಣ ಮಾಡಿದರು
ಕೃಷ್ಣ ಗಾರುಡಿ,ಆಶಾಸುಂದರಿ,ಸತ್ಯ ಹರಿಶ್ಚಂದ್ರ,ಶ್ರೀ ಕನ್ನಿಕಾಪರಮೇಶ್ವರಿ ಕಥೆ,ದೇವರ ಗೆದ್ದ ಮಾನವ,ಭಕ್ತ ಕುಂಬಾರ,ಬಬ್ರುವಾಹನ

೩.ಬಿ. ಆರ್. ಪಂತುಲು: ರಾಜನ ಅಭಿನಯಕ್ಕೆ ಒರೆ ಹಚ್ಚುವ ಪಾತ್ರಗಳಿಗೆ ಶ್ರುತಿ ಹಿಡಿದ ನಿರ್ದೇಶಕ 
ಕಿತ್ತೂರು ಚೆನ್ನಮ್ಮ,ಗಾಳಿ ಗೋಪುರ,ಎಮ್ಮೆ ತಮ್ಮಣ್ಣ,ಗಂಗೆ ಗೌರಿ,ಬೀದಿ ಬಸವಣ್ಣ,ಅಮ್ಮ,ಗಂಡೊಂದು ಹೆಣ್ಣಾರು,ಶ್ರೀ ಕೃಷ್ಣದೇವರಾಯ

೪. ದೊರೈ ಭಗವಾನ್ ಬಾಂಡ್ ಮಾದರಿ ಪತ್ರಗಳು, ತ್ಯಾಗಮಯ ಪತ್ರಗಳು, ಸಂಗೀತ ಪ್ರಧಾನ ಪಾತ್ರಗಳು ಮೂಡಿಸಿರುವ ಛಾಪನ್ನು ನೋಡಿಯೇ ತೀರಬೇಕು
ಜೇಡರ ಬಲೆ,ಗೋವಾದಲ್ಲಿ ಸಿ.ಐ.ಡಿ. ೯೯೯,ಆಪರೇಷನ್ ಜ್ಯಾಕ್ಪಾಟ್ ಸಿ.ಐ.ಡಿ. ೯೯೯,ಕಸ್ತೂರಿ ನಿವಾಸ,ಪ್ರತಿಧ್ವನಿ,ಎರಡು ಕನಸು,ಗಿರಿಕನ್ಯೆ,ಆಪರೇಷನ್ ಡೈಮಂಡ್ ರಾಕೆಟ್,ನಾನೊಬ್ಬ ಕಳ್ಳ,ವಸಂತ ಗೀತ,ಹೊಸ ಬೆಳಕು,ಸಮಯದ ಗೊಂಬೆ,ಯಾರಿವನು?,ಜೀವನ ಚೈತ್ರ,ಒಡ ಹುಟ್ಟಿದವರು  

೫. ವಿಜಯ್ : ಈ ಮಹನೀಯ ೧೦೦% ಯಶಸ್ಸು ಕಂಡ ನಿರ್ದೇಶಕ. ಅವರ ಚಿತ್ರಗಳು ಎಲ್ಲ ಆಯಾಮಗಳನ್ನು ಹೊಂದಿತ್ತು.
ಗಂಧದ ಗುಡಿ,ಶ್ರೀನಿವಾಸ ಕಲ್ಯಾಣ,ಮಯೂರ,ನಾ ನಿನ್ನ ಮರೆಯಲಾರೆ,ಬಡವರ ಬಂಧು,ಸನಾದಿ ಅಪ್ಪಣ್ಣ,ಹುಲಿಯ ಹಾಲಿನ ಮೇವು,ನೀ ನನ್ನ ಗೆಲ್ಲಲಾರೆ,ಭಕ್ತ ಪ್ರಹ್ಲಾದ

೬. ಸಿದ್ದಲಿಂಗಯ್ಯ : ಬಂಗಾರ ಛಾಪನ್ನು ಮೂಡಿಸಿದ ಮಹಾನ್ ನಿರ್ದೇಶಕ 
ಮೇಯರ್ ಮುತ್ತಣ್ಣ,ಬಾಳು ಬೆಳಗಿತು,ನಮ್ಮ ಸಂಸಾರ,ತಾಯಿ ದೇವರು,ನ್ಯಾಯವೇ ದೇವರು,ಬಂಗಾರದ ಮನುಷ್ಯ,ದೂರದ ಬೆಟ್ಟ

ಇವರ ಜೊತೆ ವೈ.ಆರ್. ಸ್ವಾಮಿ, ಸೋಮಶೇಕರ್, ಸಿಂಗೀತಂ ಶ್ರೀನಿವಾಸರಾವ್, ಪುಟ್ಟಣ್ಣ ಮುಂತಾದ ಹಲವಾರು ಮಹಾನ್ ಜೀವಗಳು ಇದ್ದಾರೆ

ಖಳನಾಯಕರು
೧. ವಜ್ರಮುನಿ 
ಮಯೂರ, ದಾರಿ ತಪ್ಪಿದ ಮಗ, ಪ್ರೇಮದ ಕಾಣಿಕೆ, ಶಂಕರ್ ಗುರು, ರವಿ ಚಂದ್ರ, ಸಂಪತ್ತಿಗೆ ಸವಾಲ್, ಬಹಾದ್ದೂರ್ ಗಂಡು, ಮುಂತಾದ ಅನೇಕ ಸಿನೆಮಾಗಳಲ್ಲಿ ರಾಜಣ್ಣ-ಮತ್ತು-ವಜರಮುನಿ ಜುಗಲ್ ಬಂಡಿ ನೋಡಿಯೇ ಆನಂದಿಸಬೇಕು

೨. ತೂಗುದೀಪ  ಶ್ರೀನಿವಾಸ್ - ರಾಜಣ್ಣ ಮತ್ತು ತೂಗುದೀಪ ಜೀವದ ಗೆಳೆಯರು ತೂಗುದೀಪ ಸಿನೆಮಾದಿಂದ ಶ್ರೀನಿವಾಸ್ ಕೊನೆ ಉಸಿರು ಎಳೆಯುವ ತನಕ ರಾಜಣ್ಣ ಮಾಡಿದ ಎಲ್ಲ ಚಿತ್ರಗಳಲ್ಲೂ ಇದ್ದರು, ರಾಜಣ್ಣ ಮಾಡಿದ ಸಹಾಯಕ್ಕೆ ಶ್ರೀನಿವಾಸ್ ಅವರ ಮನೆಗೆ ಮು. ಪ. ನಿಲಯ ಅಂತ ಇತ್ತಿದ್ದ್ದರೆ ಅಂದ್ರೆ ಮುತ್ತುರಾಜ್-ಪಾರ್ವತೀ ನಿಲಯ ಅಂತ.
ಶಂಕರ್ ಗುರು, ತಾಯಿಗೆ ತಕ್ಕ ಮಗ, ಜೀವನ ಚೈತ್ರ, ಕಾಮನಬಿಲ್ಲು ಮುಂತಾದ ಚಿತ್ರಗಳು

ಸಹನಟರು
೧. ದ್ವಾರಕೀಶ್  - ಮೆಯೇರ್ ಮುತ್ತಣ್ಣ, ಬಂಗಾರದಮನುಷ್ಯ, ಗಾಂಧಿನಗರ ಮುಂತಾದ ಚಿತ್ರಗಳು
೨. ನರಸಿಂಹರಾಜು - ಲೆಕ್ಕವಿಲ್ಲದಷ್ಟು ಚಿತ್ರಗಳು ಇಬ್ಬರ ನಟನೆ ಅಮೋಘ

ಚಾರಿತ್ರಿಕ ಸಹನಟರು
೧. ಬಾಲಣ್ಣ - ಬಂಗಾರದ ಮನುಷ್ಯ, ಶಂಕರ್ ಗುರು, ಕಾಮನ ಬಿಲ್ಲು, ಭಾಗ್ಯದ ಲಕ್ಷ್ಮಿ ಬಾರಮ್ಮ, ಕಣ್ತೆರೆದು ನೋಡು, ಅಪೂರ್ವ ಸಂಗಮ, ತ್ರಿಮೂರ್ತಿ, ಭಕ್ತ ಕುಂಬಾರ, ನಾ ನಿನ್ನ ಮರೆಯಲಾರೆ ಅನೇಕ ಚಿತ್ರಗಳು
೨. ಅಶ್ವಥ್ ಕೆ. ಎಸ ಕಸ್ತೂರಿ ನಿವಾಸ, ಎರಡು ಕನಸು, ಬಡವರ ಬಂಧು, ಕಾಮನಬಿಲ್ಲು, ಹೊಸಬೆಳಕು, ಬಂಗಾರದ ಪಂಜರ, ಗಾಂಧಿನಗರ, ಚಲಿಸುವ ಮೋಡಗಳು, ಮುಂತಾದ ಚಿತಗಳು

ಅಮ್ಮನ ಹಾಗು ಅಕ್ಕನ ಪಾತ್ರದಲ್ಲಿ 
೧. ಪಂಡರಿ ಬಾಯಿ - ಇದರ ಬಗ್ಗೆ ಮತ್ತೆ ಬೇಡ, ರಾಜಣ್ಣ ನಾಯಕಿ ಯಾಗಿ, ಅಮ್ಮನಾಗಿ, ಅಜ್ಜಿ ಯಾಗಿ, ಆವರ ನಟನೆ...ಅದು ಮಾತೃ ಹೃದಯದವರಿಗೆ ಮಾತ್ರ ಸಾಧ್ಯ. ಕನ್ನಡ ಸಿನಿಮಾ ಜಗತ್ತಿನ ಅಮ್ಮ ಈ ಮಹಾ ತಾಯಿ.
೨. ಆದವಾನಿ ಲಕ್ಷ್ಮಿ ದೇವಿ : ಬಂಗಾರದ ಮನುಷ್ಯ, ಎರಡು ಕನಸು, ಚಲಿಸುವ ಮೋಡಗಳು, ಮಲ್ಲಮನ ಪವಾಡ, ಜ್ವಾಲಾಮುಖಿ ಮುಂತಾದ ಚಿತ್ರಗಳು

ನಾಯಕಿಯರು
೧. ಅಂಬಿಕ - ಸುಮಾರು ಅಣ್ಣಾವ್ರಿಗೆ ೫೦ ವರ್ಷ ಆದಾಗ ಅಂಬಿಕ ನಾಯಕಿಯಗಿದ್ದು, ಆಗ ಆಕೆಗೆ ಸುಮಾರಿ ೨೩-೨೫ ವರ್ಷ, ಆ ವ್ಯತ್ಯಾಸ ಕಾಣುವುದಿಲ್ಲ..ಸ್ನಿಗ್ದ ಸೌಂದರ್ಯ, ಅಭಿನಯ ಕಣ್ಣಿಗೆ ಹಬ್ಬ - ಚಲಿಸುವ ಮೋಡಗಳು, ಭಕ್ತ ಪ್ರಹ್ಲಾದ,ಎರಡು ನಕ್ಷತ್ರಗಳು, ಅಪೂರ್ವ ಸಂಗಮ

೨. ಗೀತ : ಸುಂದರ ನಗು, ಸುಂದರ ಅಭಿನಯ ಸರಿ ಸಮವಾಗಿತ್ತು 
ಧೃವತಾರೆ, ಅನುರಾಗ ಅರಳಿತು,ಶೃತಿ ಸೇರಿದಾಗ, ದೇವತಾ ಮನುಷ್ಯ,ಆಕಸ್ಮಿಕ

೩. ಮಾಧವಿ : ಬೊಗಸೆ ಕಂಗಳ ಚೆಲುವೆ, ಅಣ್ಣಾವ್ರ ಎತ್ತರಕ್ಕೂ ಇರುತ್ತಿದ್ದ ಅಭಿನಯ ಒಳ್ಳೆಯ ಜೋಡಿ agittu 
ಹಾಲು ಜೇನು,ಭಾಗ್ಯದ ಲಕ್ಷ್ಮಿ ಬಾರಮ್ಮ,ಅನುರಾಗ ಅರಳಿತು,ಶೃತಿ ಸೇರಿದಾಗ,ಜೀವನ ಚೈತ್ರ,ಆಕಸ್ಮಿಕ,ಒಡ ಹುಟ್ಟಿದವರು

೪. ಸರಿತಾ: ಭಾವನೆಗಳು ತುಂಬಿರುವ ಕಣ್ಣಗಳು, ಸೊಗಸಾದ ಅಭಿನಯ, ಭಾವಬಿನಯದಲ್ಲಿ ಅಣ್ಣವರಿಗೆ ಸೆಡ್ಡು ಹೊಡೆದು ನಿಲ್ಲುತ್ತಿದ ರೀತಿ - ಕೆರಳಿದ ಸಿಂಹ,ಹೊಸ ಬೆಳಕು,ಚಲಿಸುವ ಮೋಡಗಳು,ಕಾಮನ ಬಿಲ್ಲು,ಭಕ್ತ ಪ್ರಹ್ಲಾದ

೫. ಭಾರತೀ, ಜಯಂತಿ, ಲೀಲಾವತಿ, ಆರತಿ 
ಇವರೆಲ್ಲ ರಾಜಣ್ಣನ ಅಭಿನಯಕ್ಕೆ ಸರಿ ಸಾಟಿಯಾಗಿ ನಿಲ್ಲುತ್ತಿದ ಕಲಾ ಕುಸುಮಗಳು  
ಹಾಡುಗಳು, ಸಂಭಾಷಣೆ : ಚಿ. ಉದಯಶಂಕರ್, ಹುಣುಸೂರು ಕೃಷ್ಣಮೂರ್ತಿ

ಸಂಗೀತ : 
ರಾಜನ-ನಾಗೇಂದ್ರ - ಸುಮುಧುರ ಹಾಡುಗಳು - ಗಂಧದ ಗುಡಿ, ನಾ ನಿನ್ನ ಮರೆಯಲಾರೆ, ನಾನೊಬ್ಬ ಕಳ್ಳ, ಶ್ರೀನಿವಾಸ ಕಲ್ಯಾಣ, ಗಿರಿ ಕನ್ಯೆ, ಎರಡು ಕನಸು ಅನೇಕ ಚಿತ್ರಗಳು

ಉಪೇಂದ್ರ ಕುಮಾರ - ಸಿನಿಮಾಕ್ಕೆ ಜೀವ ತುಂಬುತ್ತಿದ್ದ ಸಂಗೀತ, ಪ್ರಯೋಗವಿಲ್ಲದೆ, ಇತಿ ಮಿತಿಯಲ್ಲೇ ಹಾಡುಗಳನ್ನು ನೀಡಿದ ಮಹನೀಯ - ಶಂಕರ್ ಗುರು, ಅನುರಾಗ ಅರಳಿತು, ಕಟಾರಿವೀರ,. ಮುಂತಾದ ಚಿತ್ರಗಳು

ಜಿ. ಕೆ. ವೆಂಕಟೇಶ್ - ಇಡಿ ಚಿತ್ರ ಜಗತ್ತು ಅಣ್ಣವರು ಅಂತ ಇದ್ರೆ ಈ ಮಹಾತ್ಮಾ ಒಬ್ಬರೇ, ತಮ್ಮಯ್ಯ ಅಂತ ಕರಿತ ಇದ್ದದ್ದು.  ಅವರ ಗಾನ ಸುಧೆಯನ್ನು ಹೊರಗೆ ತಂದವರು.  ಓಹಿಲೇಶ್ವರ, ಮಹಿಷಾಸುರ ಮರ್ಧಿನಿ ಯಲ್ಲಿ ಹಾಡಿಸಿದ ಇವರು ಸಂಪತ್ತಿಗೆ ಸವಾಲ್ ಚಿತ್ರದಿಂದ ಮಹಾನ್ ಗಾಯನ ಪ್ರತಿಬೆಯನ್ನು ಹೊರಗೆ ಹಾಕಿದರು.  ಸನಾಧಿ ಅಪ್ಪಣ್ಣನ ಸಂಗೀತದ ಬಗ್ಗೆ ಮಾತಾಡಲು ತಿಂಗಳು ಸಾಲದು.


ಎಲ್ಲದಕ್ಕೂ ಬೆಂಬಲವಾಗಿದ್ದ ಹಾಗೂ ಅವರ ಸಿನಿಮಾ ಇಮೇಜ್ ಅನ್ನು ಕಾಪಾಡಿದ ಇಬ್ಬರು ಮಹನೀಯರಿಗೆ ಇದು ಒಂದು ನಮನ...ಅವರುಗಳು ಯಾರು ಎಂದರೆ

ವರದರಾಜ್ - ರಾಜಣ್ಣ ಅವರ ತಮ್ಮ, ಪ್ರತಿ ಪಾತ್ರದ ಆಯ್ಕೆ, ಸಂಭಾಷಣೆಯಲ್ಲಿ, ಕಥೆಗಳ ಆಯ್ಕೆಯಲ್ಲಿ ಇವರ ಮಾತಿಲ್ಲದೆ ರಾಜಣ್ಣ ಏನು ಮಾಡುತ್ತಿರಲಿಲ್ಲ





ಚಿ. ಉದಯಶಂಕರ್ : ರಾಜಣ್ಣ ಇಮೇಜ್ ತಕ್ಕ ಹಾಗೆ ಸಂಭಾಷಣೆ, ಹಾಡುಗಳು, ಕಥೆಗಳು ಹೆಣೆಯುತ್ತಿದ ರಾಜಣ್ಣನ ಆಸ್ಥಾನದ ಕವಿ, ಕಥೆಗಾರ


ಎಷ್ಟು ಬರೆದರೂ ಸಮಾಧಾನ  ಆಗೋಲ್ಲ    - ಕಂಗಳು ತುಂಬಿ ಬಂತು, ಇಲ್ಲಿಗೆ ನಿಲ್ಲಿಸ್ತಾ ಇದ್ದೀನಿ...

Sunday, April 17, 2011

Main Azaad Hoon (1989)

I couldn't resist myself, when my friend-guide-guru, Vikramadithya mentioned above this movie, which I thought a mediocre movie on the lines of Toofan, Jaadugar, Ganga Jamuna Saraswathi, but he insisted me to watch this movie long back.  Somehow I was able to watch that movie on a sunday afternoon without disturbance, and  with ear plugs on.  

The opening scene itself made me to watch this movie with full concentration, i skipped lunch with out my knowledge, when I hung up the ear phone it was late in the evening, too late for the lunch, and tooooooo early for the dinner. But no regrets I had the feeling of watching one of the finest movie of Living God of Indian Cinema who changed the age old description of alphabets in English, From A for apple, B for Ball to, A for Amitabh, B for Bachhan.


The movie was an adaption of 1941 Frank Capra film, Meet John Doe.  But the beauty of this movie is, it is totally Indianised, and it will not let you off from the seat for the whole length of the movie.  The script is as solid as a rock, the dialogues were as punching as punch of Muhammed Ali, the background score is as impressive and sharp as Arjuna's Arrow, and all the character played as if it is their life time performance.  You will never feel, it is a drama enacted on the screen.
AB, had shed all his he-manic image, no unncessary song sequence, no scene which deviates mood of the movie, if a scene is missed, it is as good as missing a chapter in Mahabaratha.  His dialouges, his expression, his body languages are never seen in any of his movies, so special, and so intense.  His speech at the beginning, and the at the end of the movie, just trickles a droplet from the eyes.  
The only movie where i liked Shabhana Azmi, she is a fine actress no doubt, but always i voted for Smitha Patil, when the two beauties from the parallel cinema's were in competition to get the awards during their hey days. She breathes fires in the role of a journalist.  Her brooding eyes, mesmarising voice, dialogue delivery, the shrewdness all she brought in to the role of the journalist.


The path of resurrection always comes with a correction, just we need to turn around to correct the path of expression of freedom. No one in this world is correct, or wrong, it is the consciousness which can make us right or wrong, always hear the inner voice, that takes you to the freedom of e-motion. 

The Movie is special, and it offers a feeling which never scene or felt on indian cinema screen.

Monday, April 11, 2011

ಅಣ್ಣಾವರ ಇನ್ನೊಂದು ಪುಣ್ಯ ದಿನ ಬಂದಿದೆ (2011)

ಅಣ್ಣಾವರ ಇನ್ನೊಂದು ಪುಣ್ಯ ದಿನ ಬಂದಿದೆ..
ಯಥಾ ಪ್ರಕಾರ ಅಣ್ಣಾವ್ರಿಗೆ ಜೈ, ಅಣ್ಣಾ ಇನ್ನೊಮ್ಮೆ ಹುಟ್ಟಿಬಾ ಅಂತೆಲ್ಲ ಹೇಳೋಕೆ ಹೊರಟಿಲ್ಲ..
ಅಣ್ಣಾವರ ಜೀವನ ಹಾದಿ, ಕಲೆತ ಹಾದಿ, ಬೆರೆತ ಮೌಲ್ಯಗಳು, ಬಿರಿದ ಭಾವನೆಗಳು ಇದನ್ನ ಸ್ವಲ್ಪ ಮಟ್ಟಿಗೆ ಪಾಲಿಸೋಣ ಅನ್ನುವ ಒಂದು ಅನಿಸಿಕೆ ಹಾಗೂ ಬಯಕೆಯಿಂದ ಉದಯಿಸಿದ ಒಂದು ಬರವಣಿಗೆ. ನನ್ನ ನೆನಪಿನಲ್ಲಿ ಉಳಿದು ಹೋದ ಕೆಲವು ಬಂಗಾರದ ನೆನಪುಗಳನ್ನ ಹೆಕ್ಕಿ ತೆಗೆಯುವ ಒಂದು ಸಣ್ಣ ಪ್ರಯತ್ನ

ಬಂಗಾರದ ಮನುಷ್ಯ
"ತಾಯಿ, ಒಂದು ಮುರಿದ ಸಂಸಾರವನ್ನ ಎತ್ತಿ ಹಿಡಿಯೋಕೆ ನಿನ್ನ ಬಳಿ ಬಂದಿದ್ದೀನಿ, ಈ ಅಜ್ಞಾನಿ ತಪ್ಪು ಮಾಡಿದರು..ನೀನು ಮುನಿಸಿಕೊಳ್ಳದೆ ಕಾಪಾಡಬೇಕು".

ಕವಿರತ್ನ ಕಾಳಿದಾಸ
"ಸ್ನಾನ ಗೀನ ದೇಹಕಲ್ಲ ಕಂದ ಮನಸಿಗೆ"

ಸಮಯದ ಗೊಂಬೆ
"ಯೋಗಿ ಪಡೆದದ್ದು ಯೋಗಿಗೆ ಜೋಗಿ ಪಡೆದದ್ದು ಜೋಗಿಗೆ"

ಕಾಮನಬಿಲ್ಲು
ನನಗೆ ತುತ್ತು ಅನ್ನ ನೀಡ್ತಿದ್ದ ನನ್ನ ತಾಯಿ ಕಣ್ಣು ನೋಡ್ತಾ ಇದ್ದನೇ ಹೊರತು ಅವಳ ಹರಕು ಸೀರೆ ಸೆರಗು ನನ್ನ ಕಣ್ಣಿಗೆ ಕಾಣಿಸಲೇ ಇಲ್ಲ

ಹೊಸ ಬೆಳಕು
ಮುಳ್ಳನ್ನ ಮುಳ್ಳಿನಿಂದಲೇ ತೆಗೆಯಬೇಕು, ನಾನು ಹಾಗೆ ಮಾಡದಿದ್ದರೆ, ನಿನಗೆ ಹರಕು ಬಟ್ಟೆ ಒಗೆಯುವುದು ತಪ್ಪುತಿರಲ್ಲಿಲ್ಲ, ನಿನಗೆ ಇಷ್ಟ ಬಂದ ಹಾಗೆ ಕಾಲೇಜ್ ಗೆ ಹೋಗೋಕೆ ಆಗ್ತಾ ಇರ್ಲಿಲ್ಲ, ನಿನ್ನ ಅಪ್ಪನಿಗೆ ಇದು ಅರ್ಥ ಆಗ್ಲಿಲ್ಲ, ನಿನಗೆ ಹೇಗೆ ಅರ್ಥ ಆಗ್ಬೇಕು


ಸಂಧ್ಯಾರಾಗ
ದಯಾ ತೋರು ಗುರುವೇ ...ಗುರು ನಡೆಯೋಕೆ ಆಗದೆ ಮಲಗಿದ್ದಾಗ, ಅಣ್ಣಾವರ ಹಾಡು ಕೇಳಿ ಬಾಗಿಲತನಕ ಬರುತ್ತಾರೆ, ಆಗ ಗುರು ಪತ್ನಿ, ಅಣ್ಣಾವರಿಗೆ ಹಾಡು ಹಾಡು ಅಂತ ಹೇಳುತ್ತಾರೆ, ಆಗ
ಅಣ್ಣಾವರ ಅಭಿನಯ ನೋಡೋಕೆ ಕಣ್ಣು saaladu

ಗಾಂಧಿನಗರ
ತಾಯಿ ಊಟ ಕೊಡಿ ಅಂತ ವಟಾರ ಎಲ್ಲ ಸುತ್ತು ಹೊಡೆದಾಗ ಎಲ್ಲರು ಬಾಗಿಲು ಹಾಕಿ ಕೊಳ್ಳುತ್ತಾರೆ...ಅಣ್ಣಾವರ ಅಸಹಾಯಕತೆ, ಹೊಟ್ಟೆ ಹಸಿವು, ನಿರಪರಾಧಿಯಾಗಿದ್ದರು ಶಿಕ್ಷೆ...ಅಣ್ಣಾವರಿಗೆ ಅವರೇ ಸಾಟಿ

ಜೀವನಚೈತ್ರ
ನಾದಮಯ ಹಾಡಿಗೆ ಅದ್ಭುತ ಅಭಿನಯ, ಗಾಯನ

ಒಂದು ಮುತ್ತಿನ ಕಥೆ
ಮುತ್ತು ಬೇಕ ಮುತ್ತು...ನಿಮ್ಮ ಮನೆ ಹಾಳಾಗ, ಬೆಂಕಿ ಬಿದ್ದು ಮಗು ಏನಾಗಿದೆ ಅಂತ ಕೇಳೋದು ಬಿಟ್ಟು ಮುತ್ತು, ಮುತ್ತು ಅಂತ ಹೇಳ್ತಿರ...ಹಾಳಾಗಿ ಹೋಗಿ

ಸನಾದಿ ಅಪ್ಪಣ್ಣ
ನನ್ನ ಸಂಗೀತ ಇರೋದು, ದೇವರ ಪೂಜೆಗೆ...ನಿಮ್ಮಂಥವರ ಕುಣಿತಕ್ಕೆ ಅಲ್ಲ

ಮೇಯೆರ್ ಮುತ್ತಣ್ಣ
ನಮ್ಮ ದೇಶದಲ್ಲಿ ಇರುವ ಕಲೆ ಪ್ರದರ್ಶನ ಮಾಡೋದು ಬಿಟ್ಟು, ನಮ್ಮ ದೇಶದ ದರಿದ್ರಕ್ಕೆ ಬಣ್ಣ ಹಾಕಿ, ವಿದೇಶದವರಿಗೆ ತೋರಿಸೋದು ಯಾವ ಸೀಮೆ ಶೋಕಿ ಅಮ್ಮಣ್ಣಿ, ನಮ್ಮಪ್ಪ ಬೇಲೂರ, ಹಳೇಬೀಡು ನಲ್ಲಿ ಕೆತ್ತಿರುವ ಶಿಲ್ಪಿ ಕಲೆ ನಾವು ಕಾಗದದಲ್ಲಿ ಬರೆಯೋಕೆ ಆಗುತ್ತ..ಇದು ನಮ್ಮ ದೇಶ, ಇದು ನಮ್ಮ ಬಾಷೆ ಅಂತ ಎದೆ ತಟ್ಟಿ ಹೇಳುವ ತರಹ ಮಾಡಬೇಕು ಅಮ್ಮಣ್ಣಿ

ಕೆರಳಿದ ಸಿಂಹ
ಶತಕೋಟಿ ದೇವರು ಹರಸಿದರೇನು...ಅಮ್ಮನ ಹರಕೆಗೆ ಸರಿ ಸಾಟಿ ಏನು

ಗಂದದ ಗುಡಿ
ಗಂದದ ಗುಡಿ ಇದು ನಮ್ಮೂರು, ಚೆಂದದ ಗುಡಿ ಇದು ನಮ್ಮೂರು ಅಂತ ಹೇಳಿಕೊಂಡು ಬೆಳದಿರೋನು ಸಾರ್ ನಾನು..ದಯವಿಟ್ಟು ನನಗೆ ಅವಕಾಶ ಕೊಡಿ

ರಣಧೀರ ಕಂಟೀರವ
ಒಂದು ಸಿಂಹವನ್ನ ಹಿಡಿಯಲು ನೂರು ಕುರಿಗಳು

ಮೇಲೆ ಕಂಡ ತುಣುಕುಗಳು ಬರಿ ದಂಡೆಯಲ್ಲಿ ಸಿಕ್ಕ ಮುತ್ತುಗಳು, ರಾಜಣ್ಣ ಎನ್ನುವ ಸಮುದ್ರದಾಳಕ್ಕೆ ಹೋದರೆ ಸಿಗುವ ಮುತ್ತುಗಳು ಅನರ್ಘ್ಯ....

ಪ್ರಪಂಚಕ್ಕೆ ಒಬ್ಬರೇ ರಾಜ ಅದುವೇ ನಮ್ಮ ರಾಜಣ್ಣ