Sunday, November 11, 2012

ಮೈನಾವತಿ ಸಿನಿ ಹೃದಯವಂತರ ನೆನಪುಗಳಿಂದ ಮಾಣಿಕ್ಯ (2012)


ಅರವತ್ತು ಎಪ್ಪತ್ತರ ದಶಕದ ಸಿನಿಮಾಗಳನ್ನು ನೋಡಿದವರಿಗೆ ನೋಡಲು ಇಚ್ಚಿಸುವವರಿಗೆ ಪಂಡರಿಬಾಯಿ ಮತ್ತು ಮೈನಾವತಿ ಮರೆಯಲಾರದ ಹೆಸರುಗಳು. 

ಅಕ್ಕ ಪಂಡರಿಬಾಯಿ ಸಾಧು ಸ್ವಭಾವದ ಪಾತ್ರಗಳನ್ನೂ ಮಾಡಿ "ಅಮ್ಮ" ಎಂದರೆ ಹೀಗೆ ಇರುತ್ತಾರೆ ಎನ್ನಿಸುವಷ್ಟು ನೈಜತೆ ಮೆರೆದಿದ್ದಾರೆ

ಆದರೆ ಮೈನಾವತಿ ಘಟವಾಣಿ, ಜಂಭದ ಹುಡುಗಿ, ಹಟಮಾರಿ, ಮತ್ತು ಹಾಸ್ಯ ಪಾತ್ರಗಳಿಂದ ರಂಜಿಸುತಿದ್ದರು. 


ಕನ್ನಡ ಚಿತ್ರಗಳಲ್ಲಿ ಬಾಲಕೃಷ್ಣ ನರಸಿಂಹರಾಜು ಇವರಿಬ್ಬರನ್ನು ಪರದೆಯ ಮೇಲೆ ಹುರಿದು ಮುಕ್ಕುವಂತೆ ಅಭಿನಯಿಸುತಿದ್ದ ಪಾತ್ರಗಳು ಇಂದಿಗೂ ಜೀವಂತ.

ಇಂತಹ ಕಲಾವಿದೆಯನ್ನ ದೇವರು ಸಹ ಬಿಟ್ಟಿರಲಾರ ಎನ್ನಿಸುತ್ತದೆ, ಕಾರಣ ಅವರು ಚಿತ್ರಗಳಲ್ಲಿ ಗೋಳುಹುಯ್ದುಕೊಂಡ ಬಾಲಣ್ಣ, ನರಸಿಂಹರಾಜು, ಕಲ್ಯಾಣ್ ಕುಮಾರ್ ಎಲ್ಲರು ದೇವರ ಬಳಿ ಇರುವಾಗ ಇವರನ್ನು ಕರೆದು ಕೊಂಡು ಬಿಟ್ಟ..

ಈ ಕಲಾವಿದೆಯನ್ನ ಕಪ್ಪು ಬಿಳುಪು ಚಿತ್ರಗಳಲ್ಲಿ ನೋಡುವುದೇ ಒಂದು ಸುಂದರ ಅನುಭವ..ಮರೆಯಾಗದಿರಲಿ ಈ ಮಾಣಿಕ್ಯ ಸಿನಿ ಹೃದಯವಂತರ ನೆನಪುಗಳಿಂದ!!!


Thursday, October 11, 2012

Redefined Alphabets in Indian Cinema - Big B - 70th Birthday!! (2012)


The man who reinvented the order of the alphabets..ABC.. 

he him self a corporate entity for the movie moguls of World in General and India In particular.  

He enthralled all of the movie buffs in his own way..It is unethical, inhuman or a shameful act to list of top ten movies of him.  Each and every movie is a gem in its own way.  Just to satisfy my ego, am listing out few of his best movies in my opinion which stands tall all the way.

1. Kaala Patthar
Courtesy - Google Images
The intensity filled eyes, very less and less dialogues  the scene where he catch holds of the knife with the sharp edge, and looks deep in the villain eyes..a seriously wonderful intensity filled performance of AB.

2. Anand
Courtesy - Google Images
The star about to explode, the serious acting, the dialogue delivery, no no star image..all this almost gave a head to head fight with Rajesh Khanna. 

3. Sharaabhi
Courtesy - Google Images
He is the one who almost redefined drunken act on the screen. and this movie has out and out sharabhi act through out the movie.  The dance sequence with Jayapradha where he keeps on banging that paayal with effective involvement and the interrupted singing in the same sequence just spectacular. The fight with sharabhi people a new kind.

4. Muqaddar ka Sikandar 
Courtesy - Google Images
Jugal bandhi song with Rekha is just awesome. The "tere bhi na bhi kya jeena.." song acting, and last fight all are too good.

5. Main azaad hoon
Courtesy - Google Images
No heroism, no image..a plain but powerful movie.  Worth watching many times.  Shabhana Azmi powerful performance, and Big B towering performance makes this as a gem. How the media are making fool of the public nicely portrayed in this movie.

6. Aankhen 
Courtesy - Google Images
You write a script..and AB with out any hassles he will get in to the skin.  Here playing a typical cranky role..what a performance from him.

7. Abhimaan
Courtesy - Google Images
How ego can destory the nice family, his brooding eyes, egoistic expression, the frustration everything comes in this great movie.

8. Bombay to Goa
Courtesy - Google Images
Ekdum raw performance..no inhibition, no star giri...

9. Agneepath
Courtesy - Google Images
There is no actor who can repeat his act of Vijay Deenanath Chouhan..is there any?..a master piece performance from the master.

10. Namak Haraam
Courtesy - Google Images
Again friendship, frustration, revenge, sacrifice everything comes in a package in this movie.


There are other movies to which didn't appeared in the listed out movies ..Sholay, Deewaar, Laawaris, Don, Shaan, Zanjeer...and so many..But my personal best are listed above.


Few picks from his movies are

1. Comic timing in Chupke Chupke
2. Dialogues in Deewar
3. Towering performance in Kabhi Kabhi
4. Fire with Fire in Trishul
5. Famous mirror acting in Amar Akbar Anthony
6. Famous Pan dance in Don
7. Mere Angaane mein dance in Lawaris
8. Intensity role in Zanjeer
9. Action, Drama, Humor in Sholay
10. Super dance for Apni to jaise taise in Lawwaris and Pagha Gungru..in Namak Halaal

many more endless....

He is celebrating 70th Birthday..a milestone in its own way in the hindu tradition.  

The man who is stepping in to 70th year..but has a enthusiasm of a teenager.  

Common friends let us wish the Emperor of Indian Cinema's Magical Kingdom The Amitabh Bachhan..

a special birthday..

Happy Birthday to God of Indian Cinema....Amitabh Bachhan!!!

Wednesday, July 18, 2012

Rajesh Khanna - The Phenomena (2012)

जिन्दगी बादी होनी चाहिहे लम्बी नही।..!!!


His famous dialogue from the evergreen movie "Anand"


He wrote a new chapter in the movie..irrespective of the language barrier.  He created his own path..where few dreaded to tread along.


His style, the looks, the tweaky smile, nodding head..all these made him a first of its kind in the movie world. He was simple man's lover boy.  


The scene where Rajesh says to Amitabh..."am seeing my death in your eyes..." my all time favorite dialogue. The beauty of friendship echoes in those words!!!!


The greatest movies I admire him was in Anand,  Namak Haram & Bawarchi. These are the perfect university for how lead the life.  


I admire him on most of his movies...but the best pick are :


1. Anand : How to lead the life when you know you are at the end of the tunnel.  His body language, dialogues, songs..his jugal bandhi with Amitabh, Johny Walker are still fresh in my memory.


2. Namak Haram : Always look at the situation from close quarters...be with them..then you realise the pain.  How neatly explains this basic principle in the movie..tailor made for Rajesh & Amitabh.


3. Baawarchi: Always we tend to miss the small small things which blows us out of the proportion..and ultimately we live in the mess...just take the small threads & neatly tie it..it becomes a perfect fabric.  just iron out the small small differences..you will get wrinkle free life..how beautifully essayed in this movie.


Ironically all the above three movies were from the table of Hrishikesh Mukherjee..and no doubt all these are few master pebbles from his table.


Long live Rajesh Khanna..you will be there with us forever... dialogue from your own movie...



आनंद मरा नही...आनंद मरेते नही।.. 


राजेश खन्न मरा नही राजेश खन्न मरते नही।..

ರಾಜೇಶ್ ಖನ್ನ...ಒಂದು ಸುಂದರ ಹೊಂಗನಸು (2012)

जिन्दगी बादी होनी चाहिहे लम्बी नही।..


ಅದ್ಧುತವಾದ ಸಂಭಾಷಣೆ.ಆನಂದ್ ಚಿತ್ರದಿಂದ.


ತನ್ನ ನಗು ಮುಖ, ರಾಗವಾಗಿ ಸಂಭಾಷಣೆ ಹೇಳುವ ಪರಿ, ಸುಂದರ ನಡಿಗೆ..ಆಗಿನ, ಈಗಿನ ಯುವಕ, ಯುವತಿಯರೆಲ್ಲರ ಮನವನ್ನು ಕದ್ದ ನಾಯಕ..


ಸಿನಿಮಾ ನಾಯಕನಾಗಲು ಕಟ್ಟು ಮಸ್ತಾದ ದೇಹವಿರಲೇ ಬೇಕು ಎನ್ನುವ ಅಲಿಖಿತ ನಿಯಮವನ್ನು ಕಿತ್ತು ಹಾಕಿದ ಅನೇಕ ನಾಯಕರಲ್ಲಿ ಮೊದಲಿಗೆ ನಿಲ್ಲುವಾತ ಈತ...ಆಗಿನ ಎಲ್ಲ ನಾಯಕರು ಒಂದಲ್ಲ ಒಂದು ಸ್ಟೈಲ್ ಗೆ ಹೆಸರಾಗಿದ್ದರು.  ರಾಜ್ ಕಪೂರ್ ದೇವಾನಂದ್, ದಿಲೀಪ್ ಕುಮಾರ್, ಶಮ್ಮಿ ಕಪೂರ್, ಮನೋಜ್ ಕುಮಾರ್, ಜಾಯ್ ಮುಖರ್ಜೀ,ಸುನಿಲ್ ದತ್, ಹೀಗೆ...ಅವರ ಮಧ್ಯೆ ತನ್ನ ತನವನ್ನು ಕಾಪಾಡಿಕೊಂಡು ಹಾಗೆಯೇ ಹೊಸದೊಂದು ಶಖೆಯನ್ನು  ಹುಟ್ಟು ಹಾಕಿದ ಕಲಾವಿದ...


ಶಕ್ತಿ ಸಾಮಂತ ನೀಡಿದ ಅದ್ಭುತ ಚಿತ್ರ ಆರಾಧನಾ..ಇಲ್ಲಿಂದ ಶುರುವಾಯಿತು ಕಿಶೋರ್-ರಾಜೇಶ್ ಜುಗಲ್ ಬಂಧಿ...
ಸುಲಲಿತ ಸಂಭಾಷಣೆ, ಹಾಡುಗಳು..ನಾಯಕಿಯರ ಜೊತೆ ಪ್ರೀತಿ, ಪ್ರೇಮ ಎಲ್ಲದರಲ್ಲೂ ಒಂದು ತರಹ ಹೊಸತನ ತಂದ ನಟ..


ನನಗೆ ಅತ್ಯಂತ ಪ್ರೀತಿಯ ಚಿತ್ರ ಆನಂದ್ ಹಾಗು ನಮಕ್ ಹರಾಮ್...ಇಬ್ಬರು ಸೂಪರ್ ಸ್ಟಾರ್ ಗಳು ಒಂದೇ ಚಿತ್ರದಲ್ಲಿ ಅಭಿನಯಿಸಿದ ಅತ್ಯುತ್ತಮ ಚಿತ್ರಗಳು.


ಆನಂದ್ ಸಿನಿಮಾದಲ್ಲಿ ರಾಜೇಶ್ ಬಿಟ್ಟರೆ ಬೇರೆ ಇನ್ಯಾರು ಆ ಪಾತ್ರಕ್ಕೆ ನ್ಯಾಯ ಒದಗಿಸಬಲ್ಲರು ಎನ್ನುವ ಸಂದೇಹ ಇವತ್ತಿಗೂ ನನ್ನ ಕಾಡುತ್ತದೆ..


ಆನಂದ್, ನಮಕ್ ಹರಾಮ್, ಬಾವರ್ಚಿ, ಕಟಿ ಪತಂಗ್, ಅನುರೋದ್, ಆಪ್ ಕಿ ಕಸಂ ನನ್ನ ಮೆಚ್ಚಿನ ಚಿತ್ರಗಳು..


ಆನಂದ್ ಸಿನಿಮಾದ ಕಡೆ ಸಂಭಾಷಣೆ...


आनंद मरा नही...आनंद मरेते नही।.. 


राजेश खन्न मरा नही...... राजेश खन्न मरते नही।..
ಯಾವಾಗಲೂ  ಹಸಿರಾಗಿ, ಉಸಿರಾಗಿ ತಮ್ಮ ಚಿತ್ರಗಳ ಮೂಲಕ ನಮ್ಮ ಮನದಲ್ಲಿ ಸದಾ ಇರುತ್ತಾರೆ ರಾಜೇಶ್ ಖನ್ನ...

Tuesday, July 10, 2012

ಕಲಿಯುಗ - ಭಾವನಾ ಲೋಕದ ಚಿತ್ರ (1984)


ಸಾವಿತ್ರಿ..ತನ್ನ ಗಂಡನ್ನ ಉಳಿಸಿಕೊಳ್ಳಲು ಯಮರಾಜನ ಜೊತೆ ವಾಗ್ವಾದ ನಡೆಸಿ ಗೆದ್ದಳು..ಇದಕ್ಕೆ ಸ್ವಲ್ಪ ಅಪವಾದ ಎನ್ನುವಂತೆ ತಾಯಿ ಹೃದಯ ಮಕ್ಕಳಿಗೋಸ್ಕರ ಮಿಡಿಯುತ್ತೆ ಅನ್ನುವ ವಿಷಯವನ್ನು ಹಿಡಿದು ಮಾಡಿದ ಚಿತ್ರ "ಕಲಿಯುಗ"

ನನ್ನ ಅಮ್ಮ ನನ್ನನ್ನು  ಹನುಮಂತನಗರದ ರಾಜಲಕ್ಷ್ಮಿ ಎನ್ನುವ ಟಾಕಿಸ್ಗೆ(ಟೆಂಟ್) ಕರೆದು ಕೊಂಡು ಹೋದ ಏಕೈಕ ಚಿತ್ರ...

ಒಂದು ಸುಂದರ ಜಗತನ್ನು ನನಗೆ ಪರಿಚಯ ಕೊಟ್ಟರು..ನಾನು ಭಾವನಾ    ಲೋಕದಲ್ಲಿ ತೇಲಲು ಶುರು ಮಾಡಿದ್ದೂ ಬಹುಶಃ ಇಲ್ಲಿಂದಲೇ..

ನನ್ನ ಮೆಚ್ಚಿನ ನಟ ರಾಜೇಶ್ ಅಭಿನಯಿಸಿದ ನನಗೆ ಇಷ್ಟವಾದ ಕೆಲವು ಚಿತ್ರಗಳಲ್ಲಿ ಕಲಿಯುಗ ಮತ್ತು  ದೇವರ ದುಡ್ಡು ಒಂದು... 
http://moved-movies.blogspot.in/2012_01_01_archive.html
ದೇವರ ದುಡ್ಡು ಚಿತ್ರದ ಬಗ್ಗೆ ಬರೆದಿದ್ದೆ..

ಈಗ ಕಲಿಯುಗ ಚಿತ್ರದ ಬಗ್ಗೆ ಬರೆಯೋಣ ಅನ್ನಿಸಿತು.

ರಾಜೇಶ್  - ಕನ್ನಡ ನಟ 
ಇದು ರಿಮೇಕ್ ಚಿತ್ರವಾದರೂ, ಅಮೋಘ ಅಭಿನಯ ನೀಡಿದ ಚಿತ್ರ..ನನ್ನ ನೆಚ್ಚಿನ ಆರತಿ ಕೂಡ ಅದ್ಭುತ ಎನ್ನುವ ರೀತಿಯಲ್ಲಿ ಪೈಪೋಟಿ ಕೊಟ್ಟು ಅಭಿನಯಿಸಿದ ಚಿತ್ರ ಇದು.
ಆರತಿ.ಆಗಿನ ಎಲ್ಲ ಹೆಸರಾಂತ ನಾಯಕರ ಜೊತೆ  ಅಭಿನಯ 
ಕಥೆ ಮಾಮೂಲಿ..ತಂದೆ ತಾಯಿ ಮಕ್ಕಳಿಗೋಸ್ಕರ ಜೀವ ತೇಯ್ದು ಸಾಕುತ್ತಾರೆ..
ರೆಕ್ಕೆ ಬಲಿತ ಹಕ್ಕಿಗಳು ಗೂಡು ಬಿಟ್ಟು ಹೋಗುವಂತೆ ಹಾರಿ ಹೋಗುತ್ತಾರೆ..
ಒಂದು ಚೂರು ರೊಟ್ಟಿ ಕೊಟ್ಟರೆ ಜೀವನವಿಡಿ ಹಿಂದೆ ಬರುವ ಶ್ವಾನದಂತೆ ರಕ್ತ ಸಂಬಂಧವಿಲ್ಲದಿದ್ದರು ನೆರಳಾಗಿ ಸಾಕುವ ಸಾಕು ಮಗ...

ಕಡೆಗೆ ಮಕ್ಕಳಿಗೆ ತಾವು ಜೀವನದಲ್ಲಿ ಎಡವಿ ಬಿದ್ದು..ಮತ್ತೆ ಶರಣು ಅಂತ ಬಂದಾಗ ಅಪ್ಪ ಮಕ್ಕಳಿಗೆ ಶಿಕ್ಷೆ ಕೊಡಬೇಕು ಅಂತ ಬಯಸುತ್ತಾನೆ.

ಆದ್ರೆ ತಾಯಿ ಹೃದಯ ತಾನು ಗಂಡನ ಕಷ್ಟದಲ್ಲಿ ನೆರಳಾಗಿ ಜೊತೆಯಿದ್ದು..ಹೆಗಲಿಗೆ ಹೆಗಲು ಕೊಟ್ಟು ನಿಂತರು..ಕಡೆಗೆ ಬಯಸುವುದು ಮಕ್ಕಳ ಸಾನಿಧ್ಯ

ಕಡೆಗೆ ಗಂಡ ಹೆಂಡತಿಯನ್ನು ಅರ್ಥ ಮಾಡಿಕೊಂಡಿದ್ದರು ಕೂಡ, ಮಕ್ಕಳ ಮೇಲಿನ ಕೋಪಕ್ಕೆ ದೂರ ನಿಲ್ಲಲು ನಿರ್ಧಾರ ಮಾಡಿ..ಹೆಂಡತಿಯ ದುಡುಕು ಮಾತುಗಳಿಂದ ನೊಂದು ಹೃದಯಾಘಾತವಾಗಿ ಮಡಿಯುತ್ತಾನೆ..ಮತ್ತು ಉಯಿಲು ಪತ್ರದಲ್ಲಿ ತನ್ನ ಎಲ್ಲ ಆಸ್ತಿಯ ಬಹು ಭಾಗವನ್ನು ತನ್ನ ಸಾಕು ಮಗನಿಗೆ ಬಿಟ್ಟು, ಮಡದಿಯ ಪುತ್ರ ಮೋಹಕ್ಕೆ ಕೆಲವು ಲಕ್ಷ ರುಪಾಯಿಗಳನ್ನು ಕೊಡುವುದು ಎಂದು ಬರೆದಿರುತ್ತಾನೆ

ಮಕ್ಕಳಿಗೆ ತಮ್ಮ ತಪ್ಪು ಅರಿವಾಗುವಷ್ಟರಲ್ಲಿ ಪಿತನ ಕಳೆದುಕೊಂಡು ಅನಾಥವಾಗುತ್ತಾರೆ..

ರಾಜೇಶ್ ಜೀವಮಾನದ ಶ್ರೇಷ್ಠ ನಟನೆ..ಪ್ರತಿಯೊಂದು ಸನ್ನಿವೇಶವನ್ನು ಅನುಭವಿಸಿ ಅಭಿನಯಿಸಿದ್ದಾರೆ..ಅವರು ಹೇಳುವ ಸಂಭಾಷಣೆ.."ಸಾವು ತಾನಾಗೆ ಬರುವವರೆಗೆ ಸಾಯಲು ಇಷ್ಟ ಪಡುವುದಿಲ್ಲ..ಸತ್ತ ಮೇಲೂ ಬದುಕಲು ಇಷ್ಟ ಪಡುತ್ತೇನೆ.." ಅದ್ಭುತ ಸಾಲುಗಳು..ರಾಜೇಶ್ ಪ್ರತಿಯೊಂದು ಸಂಭಾಷಣೆಯು ಕರತಲಾಮಲಕ ಎನ್ನುವಷ್ಟು ಸಲೀಸಾಗಿ ಹೇಳಿದ್ದಾರೆ..

ಆರತಿ ಕಣ್ಣಲ್ಲೇ ಭಾವನೆಗಳನ್ನು ವ್ಯಕ್ತ ಪಡಿಸುತ್ತಾ..ತನ್ನ ಮಕ್ಕಳೆಲ್ಲ ಮೋಸ ಮಾಡಿ ಬಿಟ್ಟು ಹೋದಾಗ ತನ್ನ ಸಾಕು ಮಗನನ್ನು ಕರೆದು "ನಂದೀಶ ಯಾಕೋ ನನ್ನ ಹೊಟ್ಟೆಯಲ್ಲಿ ಹುಟ್ಟಲಿಲ್ಲ?" ಎಂದು ಹೇಳುವ ದೃಶ್ಯ ನಿಜಕ್ಕೂ ಕಣ್ಣೇರು ತರಿಸುತ್ತೆ ...

ಆರತಿಯಾ ಅಭಿನಯ ಮೆಚ್ಚಿದ ಕೆಲವು ಚಿತ್ರಗಳ ದೃಶ್ಯಗಳಲ್ಲಿ  ಇದು ಒಂದು.. ಕಡೆಗೆ ಮಕ್ಕಳ ಮೇಲಿನ ಪ್ರೀತಿಯಿಂದ ಗಂಡನಿಗೆ "ನಿಮ್ಮ ಹೃದಯ ಕಲ್ಲು..ಕಲ್ಲು" ಎಂದು ಹೇಳುವ ದೃಶ್ಯ..ತಾಯಿ ಪ್ರೇಮವನ್ನು ಸಾರಿ ಸಾರಿ ಹೇಳುತ್ತದೆ...ಅಮೋಘ ಅಭಿನಯ..

ನನ್ನ ಅಚ್ಚು ಮೆಚ್ಚಿನ ಹಾಗು ನಾನು ಆರಾಧಿಸುವ ಬಾಲಣ್ಣ ಈ ಚಿತ್ರದಲ್ಲಿ ಹೇಳುವ ಸಂಭಾಷಣೆ "ನಾನು ಹೋಗೋಲ್ಲ..ನನ್ನ ಈ ಮನೆಯಿಂದ ಹೊರಗೆ ಹಾಕಬೇಡಿ.." ಎಂದು ಮಳೆಯಲ್ಲಿ ತೋಯುತ್ತ ಹೇಳುವ ಅಭಿನಯ..ಮಳೆಯಲ್ಲೂ ಕಣ್ಣೀರು ತರಿಸುತ್ತೆ.... 
ಅಭಿನಯದ ವಿಶ್ವ ಕೋಶ...ನಮ್ಮ ಬಾಲಣ್ಣ 
ಗಂಡನ ಮೇಲೆ ಪ್ರೀತಿ ಮಮಕಾರ ಎಷ್ಟೇ ಇದ್ದ್ದರು.. ತಾನು ಜನ್ಮ ನೀಡಿದ ಕಂದಮ್ಮಗಳು ಏನೇ ತಪ್ಪು ಮಾಡಿದರು ಅದನ್ನು ಕ್ಷಮಿಸುವ ಉದಾರ ಗುಣ ತಾಯಿಯಲ್ಲಿ ತೋರುವ ಕಥೆಯಲ್ಲಿ ಪ್ರತಿಯೊಬ್ಬರ ಅಭಿನಯ ಸ್ಮರಣೀಯ...

ಸಾವಿರ ಜನುಮ ಬರಲೇನು..ನೀನು ಇರುವಾಗ ನನಗೆ ಭಯವೇನು..
ನಿಮ್ಮ ತೊಳಲ್ಲಿ ನಾ ಸೇರೆಯಾದಾಗ ಸಾವು ಕೂಡ ಹಿತವೇನು
ಜೀವನ ನನಗೆ ಸಿಹಿಯಾಯ್ತು ..ಕಹಿ ನೀ ಬಂದು ಬಾಳಿಂದ ದೂರಾಯ್ತು.. 
ಎಂತಹ ಸೊಗಸಾದ ಸಾಲುಗಳು..ದಾಂಪತ್ಯ ಅಂದ್ರೆ ಇದೆ ಅಲ್ಲವೇ...

ತಾಯಿ ಜನ್ಮ ಕೊಡುತ್ತಾಳೆ
ತಂದೆ ಬಾಳು ಕೊಡುತ್ತಾನೆ..
ತಾಯಿ ಕ್ಷಮಿಸುತ್ತಾಳೆ
ತಂದೆ ಶಿಕ್ಷಿಸಿ ದಾರಿ ತೋರುತ್ತಾನೆ..
ಆದರೆ ಪ್ರೀತಿಸಿ, ಶಿಕ್ಷಿಸಿ, ಕ್ಷಮಿಸುವ ಉದಾರಿಗಳು 
ಅವರು ಯಾರು ಎಂದರೆ...
ತಂದೆ ತಾಯಿ ಮಾತ್ರ..
ಅದು ಸಾರ್ವಕಾಲಿಕ ಸತ್ಯ..

Saturday, June 16, 2012

12 Angry Men (1957)

This is one of the rare movie where there is no show bazzy to the heights!!!!  

The movie counts on the human emotion. The movie is a court room drama all the way for about 1.30 Hours.  For Indian audience this movies sounds different, as there is no jury system in our judiciary, but it closely reflects our village panchayat, where elders of the village usually decides guilty or not guilty after examination of the facts and the truths.

This movies clearly shows the prejudice is the word which can act more on human psyche.  The movie depicts any decisions, or judging on anything should never be suicidal, churn the facts, situation to come out with a clear words than judging something without knowing the facts.

We can not think something..and ink something that is the essence of the whole movie!!!

This movie shows various shades of human mentality, worth watching, nice dialogues, tight screenplay, and wonderful portraying of each character according to the shades.

Saturday, May 5, 2012

Seven Samurai - Akira Kurosawa (1954)

This movie was always in my wish list.  After watching Rashoman, and Dreams..my great friend Vikram suggested me to watch this.  The grand marathon movie is of about 3 Hours 26 Minutes classic released in 1954.  Some how the day came in.

This movie is all about the farmers guts to get rid of the bandits who used to torment the villagers at their will. 

As always happens, there were indifference among the villagers to get rid of bandits or feed them on regular basis and plead them not to end the lives.

The grand-dad of the village of the opinion to hire good samurai's who help us only for the meals villagers would provide, and nothing extra.  So few volunteers who were effected by the bandits one or the other way decides to hire the samurai's.  

The movie ticks off from here, the alignment of seven samurai for the task was hillarious, and at the same time..shows the emotional side of the humans as well.  

The finding of the last samurai was the most hilarious one, and from then on he carries the movie on his shoulder.  The favorite actor of Akira Kurosawa steals the show from there on.  He histrionics, body language, dialogue delivery, expression, punch line all worth mentioning.

Breeze camera work, sleek editing, awesome dialogues, and few one liners, and Kurosawa's trade mark rainy shot just takes the breath away. There is not even a single dull moment in the entire length of the movie.


Every character in this movie doesn't act, instead they become the characters itself. 

The plan to stop the bandits, its prepartion, and execution everything had been shot very well.

This movie has some of the best dialogues to ponder over long time

  • Danger always strikes when everything seems fine


  • So. Again we are defeated. The farmers have won. Not us.


  • This is the nature of war. By protecting others, you save yourself. If you only think of yourself, you’ll only destroy yourself.

  • Bandits are coming, you fool. Why worry about the beard, when the head is about to fall?

  • A good fort needs a gap. The enemy must be lured in. So we can attack them. If we only defend, we lose the war.

  • Well — it's impossible to kill 'em all, so I usually run away

  • As a matter of fact, I'm preparing for a tough war. It will bring us neither money nor fame. Want to join?.....may be we die this time!!!!

The last scene, where in two surviving samurai talks to each other saying "we have survived again"...and with a pause "Villagers won...we were defeated again" signifies how the moods of the human changes....

This movie inspired making many movies like The Magnificent Seven,  The Guns of Navarone,  and many more..and our own Sholay...

This movie is about different shades of human beings...A great salute to the master craftsman AKIRA KUROSAWA.

Monday, April 23, 2012

ಅಣ್ಣಾವ್ರೆ ನಿಮಗೆ ಜನುಮ ದಿನದ ಶುಭಾಶಯಗಳು (2012)

ಕರುನಾಡು ಕನ್ನಡಮ್ಮನ ದೇವಾಲಯ
ಆ ದೇವಾಲಯದ ಅರ್ಚಕರು ಅನೇಕ
ಪ್ರತಿ ಅರ್ಚಕರು ತಮ್ಮ ತನು ಮನಗಳಿಂದ ಆ ದೇವಿಯನ್ನು ಅರ್ಚಿಸಿ
ಕೆಲವರು ನಟವರರಾದರು..!!!!!
ಕೆಲವರು ನಟಿಯರಿಗೆ ವರರಾದರು!!!
ಆದರೆ ನಮ್ಮ ಅಣ್ಣ ರಾಜಣ್ಣ ವರ ಪಡೆದ ನಟರಾಗಿ ವರನಟರಾದರು!!!
ಎಲ್ಲಕಡೆ ಕೂಗು..ಅಣ್ಣ ಮತ್ತೊಮ್ಮೆ ಹುಟ್ಟಿ ಬನ್ನಿ ಅಂತ ಹೇಳುತ್ತಾರೆ..
ಆದ್ರೆ ನನ್ನ ಕೂಗು..ಅಣ್ಣ ಹೋಗಿದ್ದರಲ್ಲವೇ ಮತ್ತೊಮ್ಮೆ ಹುಟ್ಟಿ ಬನ್ನಿ ಎಂದು ಹೇಳುವುದು 
ಅವರು ನಮ್ಮ ಹೃದಯ ಸಿಂಹಾಸನಧೀಶರಾಗಿ ಅಜರಾಮರ
ಆವರ ಪಾತ್ರಗಳು, ಸಂಭಾಷಣೆ, ಅಭಿನಯ, ಹಾಡುಗಾರಿಕೆ ಇವನ್ನು ನಾವು ನೂರು ಜನ್ಮ ಎತ್ತಿದರು ಮರೆಯಲು ಸಾಧ್ಯವಿಲ್ಲ..ಅಂಥಹ ಪಾತ್ರಗಳ ಪಿತಾಮಹ ನಮ್ಮ ರಾಜಣ್ಣ
ಕೆಲವರು ಇರುವಾಗಲೇ ಮರೆಯಾಗುತ್ತಾರೆ...ಕೆಲವರು ಮರೆಯಾದಮೇಲೆ ಇರುತ್ತಾರೆ ಆದರೆ ನಮ್ಮ ಅಣ್ಣ..ಸದಾ ಕಣ್ಣ ಮುಂದೆಯೇ ಇರುತ್ತಾರೆ ನಮ್ಮ ದಿನ ನಿತ್ಯದ ಜೀವನದ ಹಾದಿಯಲ್ಲಿ..
ನಿಮ್ಮ ಪಾತ್ರದ ಹರವು ನಮ್ಮ ಕಾವೇರಿ ನದಿಯ ಹರವಿಗಿಂತ ಮಿಗಿಲು..
ಅಣ್ಣಾವ್ರೆ ನಿಮಗೆ ಜನುಮ ದಿನದ ಶುಭಾಶಯಗಳು..

Saturday, April 14, 2012

ದಶಮುಖ ಒಂದು ವಿಭಿನ್ನ ಚಿತ್ರ (2012)

 ದಶಮುಖ ಸಿನಿಮಾದ ಜಾಹಿರಾತು, ಕೆಲವು ತುಣುಕುಗಳನ್ನ ನೋಡಿದಾಗ..ಮನಸು ಯಾಕೋ ಈ ಸಿನೆಮಾನಾ ನೋಡ್ಬೇಕು ಅಂತ ಅನ್ನಿಸ್ತು...ಶನಿವಾರ ಸಂಜೆ ಹೀಗೆ ಟಿ.ವಿ. ನೋಡುತ್ತಾ ಕುಳಿತ್ತಿದ್ದಾಗ..ದಿಗ್ಗನೆ ಎದ್ದು ಮನೆಯ ಹತ್ತಿರ ಇರುವ ವೀರೇಶ್ ಸಿನೆಮಾಸ್ ಗೆ ನನ್ನ ಪತ್ನಿಯ ಜೊತೆಗೆ ಹೋದೆ...
ಜನ ಗಣ ಮನದಿಂದ ಶುರುವಾಯಿತು...


ನಂತರ ಚಿತ್ರ ಶುರುವಾಯಿತು...


ಏನೋ ಗೊಂದಲ ಮೊದಲ ದೃಶ್ಯದಲ್ಲೇ..ಅದೇ ಗೊಂದಲ ನ್ಯಾಯಾಧೀಶ ಕೂಡ ತೋರುತ್ತಾರೆ...ಸರಿ ಮುಂದೆ ಶುರುವಾಗುತ್ತೆ ನಿಜಾವಾದ ಸಿನಿಮಾ...


ಇದು ನಿಜಕ್ಕೂ ಒಂದು ಭಿನ್ನ ಪ್ರಯತ್ನ..ಮಾಡಿದ ಎಲ್ಲ ಕಲಾವಿದರಿಗೂ ಒಂದು ತರಹ ಹೊಸ ತರಹದ ಪಾತ್ರಗಳು..
ಆದ್ರೆ ನಿಜವಾದ ಹೀರೋ...ಕೆ.ವಿ.ರಾಜು ಅವರ ಚಿತ್ರಕಥೆ...ನೀರಿನಷ್ಟೇ ಸುಲಭ...ಆದ್ರೆ ಅಷ್ಟೇ ಸುಲಲಿತ ಸಂಭಾಷಣೆ...
ನಂತರದ ನಾಯಕ...ನಮ್ಮ ರವಿ ಮಾಮ..(ರವಿಚಂದ್ರನ್)...ನಿಜಕ್ಕೋ ಅವರಿಗೆ ಒಪ್ಪುವ ಪಾತ್ರ...ಈ ಚಿತ್ರ ನೋಡಿದ ಮೇಲೆ ನಿಜಕ್ಕೋ ಕಾಡುವುದು ಮೂರು...

ಒಂದು ರವಿ, ಎರಡು ಮುದ್ದಾದ  ಮಾಳವಿಕ, ಮೂರು ಅನಂತ್ ನಾಗ್ ಅವರ ಕೊನೆಯ ದೃಶ್ಯದ ಅದ್ಭುತ ಅಭಿನಯ..

ಈ ತರಹದ ಚಿತ್ರಕತೆಯನ್ನ ಸುಮಾರು ಎರಡು ವರೆ ತಾಸು ಹಿಡಿದಿಡುವುದು ಸುಲಭದ ಮಾತಲ್ಲ..ಇದಕ್ಕೆ ಒಳ್ಳೆ ನಟರು, ಸಂಭಾಷಣೆ...ಚೌಕಟ್ಟು ಎಲ್ಲವು ಬೇಕು...ಅದು ಈ ಚಿತ್ರಕ್ಕೆ ಇದೆ...ಪಾತ್ರ ಮಾಡಿದ ಎಲ್ಲ ಕಲಾವಿದರು ನ್ಯಾಯ ಒದಗಿಸಿದ್ದಾರೆ...


ಮಾನವನಿಗೆ  ಹತ್ತು ಹಲವು ಭಾವನೆಗಳು ಇರುತ್ತವೆ..ಆದ್ರೆ ಅದನ್ನು ಒರೆ ಹಚ್ಚಿ ನೋಡುವ ಸಾಮರ್ಥ್ಯ, ತಾಳ್ಮೆ ಇರಬೇಕು ಇದು ಚಿತ್ರದ ಮೂಲ ಆಶಯ..


ಕೆಲವು ಪಾತ್ರಗಳು ಇನ್ನಷ್ಟು ಪೋಷಿಸಬೇಕಿತ್ತು ಅನ್ನಿಸುತ್ತೆ..ಮತ್ತು ಅಂತ್ಯಕ್ಕೆ ಇನ್ನಷ್ಟು ತಾರ್ಕಿಕತೆ ಬೇಕಿತ್ತು ಅನ್ನಿಸುತ್ತೆ..ಆದ್ರೆ ಹೊಡಿ ಬಡಿ, ಹುಚ್ಚು ಪ್ರೇಮದ ಅಮಲಿನ ಚಿತ್ರಗಳಿಗಿಂತ ತುಂಬಾ ಭಿನ್ನವಾಗಿ ನಿಲ್ಲುತ್ತೆ..

ಕಥೆ ಬಹಳ ಸರಳ, ಅದಕ್ಕೆ ಸಿಕ್ಕಿರುವ ಪ್ರಯತ್ನ ಚಪ್ಪಾಳೆ ಗಿಟ್ಟಿಸುತ್ತೆ
.
ರವಿಯಾ ನಟನೆ...ಎಲ್ಲವನ್ನು ಕೂಲಂಕುಶವಾಗಿ ನೋಡುವ ರೀತಿ 


ಅನಂತ್ ಅಭಿನಯ, ತಮ್ಮ ಜೀವನದ ಕಹಿ ಪ್ರಪಂಚದಲ್ಲಿ ಎಲ್ಲ ಕಡೆ ಎಂದು ಹೇಳುವ  ಪಾತ್ರ 


ಅವಿನಾಶ್ ಶ್ರೀಮಂತನ ಸೋಗಲಾಡಿ ಪಾತ್ರದಲ್ಲಿ ಸಂಭಾಷಣೆ ಹೇಳುವ ಶೈಲಿ..ತನ್ನ ನಿರ್ಧಾರವೇ ಸರಿ..ಬೇರೆಲ್ಲರೂ ಉಪಯೋಗವಿಲ್ಲ..ಅಂತ ನಿಲ್ಲುವ ತಪ್ಪು ನಿರ್ಧಾರಗಳು..ಚೆನ್ನಾಗಿ ಅಭಿನಯಿಸಿದ್ದಾರೆ..


ಮಾಳವಿಕಾ..ತನ್ನ ಮುದ್ದಾದ ಮೊಗವನ್ನು ತೋರುತ್ತ..ನಿರ್ಧಾರಗಳು ಭಾವನೆಗಳಿಗೆ ತಕ್ಕಂತೆ ಹೇಗೆ ಏರು-ಪೇರಾಗುತ್ತದೆ ಎಂದು ತೋರಿಸುವ ತವಕ


ಸರಿತಾ (ಬಹಳ ವರುಷಗಳ ನಂತರ ಮತ್ತೆ ಕನ್ನಡ ಚಿತ್ರದಲ್ಲಿ ಕಾಣಿಸಿದ್ದಾರೆ...ಅವರು ಮಾಗಿದ್ದಾರೆ ಆದ್ರೆ ಅವರ ಅಭಿನಯ ಒಂಚೂರು ಬದಲಾಗಿಲ್ಲ..ಅದ್ಭುತ ಕಲಾವಿದೆ) ಮನವೊಂದು ಕಡೆ, ದೇಹವೊಂದು ಕಡೆ, ಒಳಗೆ ಒಂದು ಕಸಿವಿಸಿ..ಹೊರಗೆ ಹೇಗೋ ಕೆಲಸ ಮುಗಿಸೋಣ ಅನ್ನುವ ಅನ್ಯಮನಸ್ಕ ಜೀವನ ..


ದತ್ತಣ್ಣ ಹಿರಿಯರು ತಮ್ಮ ಪೂರ್ವಗ್ರಹ ಪೀಡಿತ ದೃಷ್ಟಿ ಕೋನ ತಪ್ಪು ಎಂದು ತೋರಿಸುವ ಪರಿ..


ದೇವರಾಜ್ ನಾನೇ ಸರಿ ಎಲ್ಲರು ತಪ್ಪು ಎಂದು ತೋರಲು ಒದ್ದಾಡುವುದು 


ರವಿ ಕಾಳೆ (ಇನ್ನಷ್ಟು ಪೋಷಣೆ ಬೇಕಿತ್ತು)...ಎರಡು ಕಡೆ ವಾದ ವಿವಾದಗಳನ್ನು ತೂಗುತ್ತ ..ಕಡೆಗೆ ತನ್ನ ನಿರ್ಧಾರ ತಪ್ಪು ಎಂದು ತೋರುವುದು..


ಅಚ್ಯುತ ಕುಮಾರ್ ಧಾರಾವಾಹಿಗಳಲ್ಲಿನ ನಟನೆ ಬರಿ ಆಕಸ್ಮಿಕವಲ್ಲ ನಾನು ಉತ್ತಮ ನಟ ಅಂತ ತೋರಿಸಿದ್ದಾರೆ..ಸಂಭಾಷಣೆ ಪರಿ ಇಷ್ಟವಾಗುತ್ತೆ..ಬೇರೆಯವರು ತುಳಿಯಲು ಪ್ರಯತ್ನ ಮಾಡುತ್ತಾರೆ..ಆದ್ರೆ ಗಟ್ಟಿ ನೆಲ ಹಾಗು ನೆಲೆ ಸಿಕ್ಕಾಗ ಹೇಗೆ ಅದನ್ನು ಉಪಯೋಗಿಸಿಕೊಂಡು ಮೇಲೆ ಬರಬೇಕು ಎಂದು ಸೊಗಸಾಗಿ ತೋರಿದ್ದಾರೆ..


ಹೊಸ ನಟ (ನನ್ನ ಪ್ರಕಾರ - ಇನ್ನಷ್ಟು ಪೋಷಣೆ ಬೇಕಿತ್ತು)...ಉತ್ತಮ ಅಭಿನಯ ಮಾಡಿದ್ದಾರೆ..ತನ್ನ ಪೂರ್ವಾಶ್ರಮದ ಪಲುಕುಗಳು..ನಿರ್ಧಾರಗಳಿಗೆ ಹೇಗೆ ಸಹಾಯ ಮಾಡುತ್ತದೆ ಎಂದು ಚೆನ್ನಾಗಿ ವಿವರಿಸಿದ್ದಾರೆ..


ನಮ್ಮ ನಿರ್ಧಾರಗಳು ಪೂರ್ವಗ್ರಹ ಪೀಡಿತವಾದಾಗ ನಮ್ಮ ನಮ್ಭಿಕೆಗಳು ನಮ್ಮನ್ನ ದಾರಿ ತಪ್ಪಿಸುತ್ತವೆ..ಯೋಚನಾಲಹರಿಯನ್ನ ತುಂಡು ಮಾಡುತ್ತವೆ..ನಾವು ಕೇಳಿದ್ದೆ ಸತ್ಯ, ನೋಡಿದ್ದೇ ಸತ್ಯ, ಆಡಿದ್ದೆ ಸತ್ಯ ಅನ್ನ್ನುವ ಒಂದು ಭ್ರಮಾಲೋಕವನ್ನ ಸೃಷ್ಟಿ ಮಾಡುತ್ತದೆ..


ನಾವು ನಮ್ಮ ಪರಿಧಿಯಿಂದ ಹೊರಗೆ ಬಂದು ನಿಂತಾಗ, ಯೋಚನೆ ಮಾಡಿದಾಗ, ಹಾಗು ತಾರ್ಕಿಕ ಲಹರಿಯನ್ನ ಮುಂದಿಟ್ಟಾಗ ಮಾತ್ರ ನಿಜ ಅರಿಯುವ ಜಾಣ್ಮೆ, ತಾಳ್ಮೆ ಬರುತ್ತದೆ..


ಪ್ರತ್ಯಕ್ಷವಾದರೂ ಪ್ರಮಾಣಿಸಿ ನೋಡು ಅನ್ನುವ ಗಾದೆ ಆಧಾರಿತ ಕತೆ ಚೆನ್ನಾಗಿ ಮೂಡಿ ಬಂದಿದೆ...


ಚಿತ್ರ ಮುಗಿದಾಗ ಇನ್ನೂ ಏನು ಬೇಕು ಅನ್ನಿಸುತ್ತದೆ..ಅದಕ್ಕೆ ಕಾರಣ ಕಥೆ ಹಾಗು ಚಿತ್ರಕಥೆ ಒಂದು ನಿರ್ಧಿಷ್ಟ ಚೌಕಟ್ಟಿನಲ್ಲಿ ಮಾತ್ರ ಸಾಗುತ್ತದೆ...ಇನ್ನು ಉತ್ತಮ ಪಡಿಸಬಹುದಿತ್ತು ಅನ್ನುವುದು ಸರಿ ಅಂತ ನನ್ನ ಭಾವನೆ..ಆದ್ರೆ ಇದು ಒಂದು ಉತ್ತಮ ಪ್ರಯತ್ನ ಹಾಗು ಉತ್ತಮ ಚಿತ್ರ ಎನ್ನುವುದು ಮಾತ್ರ ಸೂರ್ಯ ಚಂದ್ರ ಇರುವಷ್ಟೇ ಸತ್ಯ...


ದಯವಿಟ್ಟು ಒಳ್ಳೆಯ ಕನ್ನಡ ಚಿತ್ರಗಳನ್ನ ಬೆಂಬಲಿಸಿ, ನೋಡಿ ಒಂದು ಉತ್ತಮ ಪ್ರಯತ್ನಕ್ಕೆ ಪ್ರೋತ್ಸಾಹ ನೀಡಿ..

ಕಡೆ ಮಾತು : ರವಿಚಂದ್ರನ್ ಈ ರೀತಿಯ ಪಾತ್ರಗಳು ಜೀವಂತಿಕೆ ಕೂಡಿರುತ್ತದೆ..ಸ್ವಲ್ಪ ಸಣ್ಣ ಆಗಿ, ಈ ರೀತಿ ತೀಕ್ಷ್ನ ಪಾತ್ರಗಳನ್ನೂ ಮಾಡಿದರೆ..ಅವರು ಮತ್ತೆ ಕನಸುಗಾರನ ಹಾದಿಯಲ್ಲಿ ಕನ್ನಡ ಪ್ರೇಮಿಗಳಿಗೆ ಕನಸುಗಳನ್ನು ಉಣಬಡಿಸಬಹುದು...

Wednesday, April 11, 2012

ಅಣ್ಣಾವ್ರನ್ನ ಬರವಣಿಗೆಯಲ್ಲಿ ನೆನಪಿಸಿಕೊಳ್ಳುವ ಪ್ರಯತ್ನ (2012)

ಅಣ್ಣಾ ನೀವು ನಮಗಾಗಿ...
ಇನ್ನೂರು ಚಿಲ್ರೆ ಸಿನೆಮಗಾಗಿ
ಇಲ್ಲೇ ಇರ್ತೀರಾ ಕರುನಾಡ ಹಸಿರಾಗಿ...

ರಾಜಕುಮಾರ್ ಅವರು ನಿರ್ವಹಿಸದ ಪಾತ್ರ ಬಹುಶಃ ಈ ಪ್ರಪಂಚದಲ್ಲಿ ಯಾವುದು ಇಲ್ಲ!!!!!


ನಮ್ಮ ಕರುನಾಡಿನಲ್ಲಿ ಯಾವುದೇ ದೇವರ ಪಾತ್ರ ಇರಬಹುದು, ಐತಿಹಾಸಿಕ ಅರಸರ ಪಾತ್ರ ಇರಬಹುದು, ಪತ್ತೆದಾರ ಇರಬಹುದು, ಸಂತ-ಭಕ್ತ ಇರಬಹುದು...ರಾಜ್ ಮುಖವೇ ನಮ್ಮ ಕಣ್ಣ ಮುಂದೆ ಬರುತ್ತದೆ...

ಈ ಪಾತ್ರಗಳಲ್ಲಿ ಎಷ್ಟು ಘನ-ಗಂಭೀರ ಚರ್ಯೆ, ಹಾವ-ಭಾವಗಳಲ್ಲಿ ಇರುತಿದ್ದರೂ..ಅಷ್ಟೇ ಮಿಂಚಿನ, ತುಂಟ ಪಾತ್ರಗಳಲ್ಲೂ ತನ್ಮಯತೆಯಿಂದ ಪಾತ್ರವಹಿಸುತ್ತಿದ್ದರು..

ಕೆಲವು ಪಾತ್ರಗಳು...
ಶಂಕರ್ ಗುರು : ಈ ಚಿತ್ರದಲ್ಲಿ ಗುರುವಿನ ಪಾತ್ರ ಕೇವಲ ಅಣ್ಣಾವ್ರು ಮಾತ್ರ ಮಾಡಲು ಸಾಧ್ಯ...ಆ ತರಲೆ, ತುಂಟತನ, ಹಾಸ್ಯ, ರೇಗಿಸುವ ಭಂಗಿ, ಆ ಉಡುಪು ವಯ್ಯಾರಗಳು ಕೇವಲ ಅಣ್ಣಾ ಅವರಿಂದ ಮಾತ್ರ ಸಾಧ್ಯ
ಗುರು ಪಾತ್ರದ ಮೊದಲ ದೃಶ್ಯದಲ್ಲಿ ಬಾಲಣ್ಣನನ್ನು ಗೋಳು ಹುಯ್ಕೊಳೋ ದೃಶ್ಯ ಸೊಗಸು 
"ಈ ಹುಡುಗಿಯ ಕೊಬ್ಬನ್ನು ಇಳಿಸಿ...ಕಾಶ್ಮೀರದಿಂದ ಕರ್ನಾಟಕಕ್ಕೆ ಕರೆದುಕೊಂಡು ಬರದಿದ್ದರೆ ನಾನು ಗುರುವೇ ಅಲ್ಲ" ಎಂದು ಹೇಳುತ್ತಾ ಎದೆ ತಟ್ಟಿಕೊಳ್ಳುವ ಶೈಲಿ ಸೀಟಿ ಹೊಡೆಸುತ್ತ್ತೆ..ಇ ಸಿನೆಮಾವನ್ನು ಬೆಂಗಳೂರಿನಲ್ಲಿ ಬಿಡುಗಡೆ ಯಾದಗೆಲ್ಲ ನೋಡಿದ್ದೇನೆ..ಪ್ರತಿ ಭಾರಿಯೂ ಅದೇ ಶೀಟಿ, ಚಪ್ಪಾಳೆ ಗಿಟ್ಟಿಸುತ್ತೆ ಈ ಸನ್ನಿವೇಶ 

"ಡ್ಯಾಡಿ ಕೀಪ್ ಟು ಲ್ಯಾಕ್ಸ್ ರೆಡಿ"  ಇನ್ನೊಂದು ಸೊಗಸಾದ ಸಂಭಾಷಣೆ..



ತ್ರಿಮೂರ್ತಿ: ಈ ಸಿನಿಮಾ...ಮೂರು ಭಿನ್ನ ಪಾತ್ರಗಳಿಂದ ಕೂಡಿದೆ..ಇದರಲ್ಲಿ ಎರಡನೇ ಪಾತ್ರ "ಶೇಖರ್" ಎಂಬ ಹಿಪ್ಪಿ ಪಾತ್ರದಲ್ಲಿ ಬಾಲಣ್ಣನ ಕಾಡುವ ದೃಶ್ಯಗಳು ನಗೆ ಬುಗ್ಗೆ ಉಕ್ಕಿಸುತ್ತದೆ.."ಬಿಸಾಕೋ ದುಡ್ಡನ್ನ..ನಿನ್ನ ಹೆಂಡತಿ ಮಕ್ಕಳಿಗೆ ನಾನು ಕೊಟ್ಯಾದೀಶ ಅಂತ ತೋರಿಸ್ಕೊಬೇಕು ಕಣೋ" ಅಂತ ಬಾಲಣ್ಣ ಅವರಿಗೆ ಹೇಳುವ ಭಾವಾಭಿನಯ ಸುಂದರ...

ಹೀಗೆ ಅನೇಕ ಚಿತ್ರಗಳಲ್ಲಿ ತೂಗುದೀಪ ಶ್ರೀನಿವಾಸ್, ವಜ್ರಮುನಿ, ಬಾಲಣ್ಣ, ದ್ವಾರಕೀಶ್ ಮುಂತಾದ ಅನೇಕ ಕಲಾವಿದರ ಜೊತೆ ಹಾಸ್ಯ ದೃಶ್ಯಗಳು, ಸಂಭಾಷಣೆ ನಿಜಕ್ಕೂ  ಇದೆ ಅಣ್ಣಾವ್ರ ಅನೇಕ ಗಂಭೀರ ಪಾತ್ರಗಳನ್ನ ಮಾಡಿದ್ದು ಅನ್ನುವ ಸಂದೇಹ ಕಾಡುತ್ತದೆ..

ಸಂಪತ್ತಿಗೆ ಸವಾಲ್ ನಲ್ಲಿ ಬಾಲಣ್ಣನ, ಮಂಜುಳಾ ಜೊತೆ, 
ಮಯೂರದಲ್ಲಿ ವಜ್ರಮುನಿ, 
ಭಾಗ್ಯದ ಲಕ್ಷ್ಮಿ ಬಾರಮ್ಮ - ವಜ್ರಮುನಿ
ಕಣ್ತೆರೆದು ನೋಡು - ಬಾಲಣ್ಣ
ಮೇಯರ್ ಮುತ್ತಣ್ಣ - ದ್ವಾರಕೀಶ್
ಶ್ರುತಿ ಸೇರಿದಾಗ - ಎಂ. ಎಸ್. ಉಮೇಶ್
ಶಂಕರ್ ಗುರು - ತೂಗುದೀಪ ಶ್ರೀನಿವಾಸ್, ವಜ್ರಮುನಿ
ಅನೇಕ ಚಿತ್ರಗಳಲ್ಲಿ - ನರಸಿಂಹ ರಾಜು
ಇನ್ನೂ ಅನೇಕ ಚಿತ್ರಗಳಲ್ಲಿ..ಅವರ ಹಾಸ್ಯ ಪ್ರಜ್ಞೆ ಅನಾವರಣಗೊಂಡಿದೆ 


ಅವರ ಹಾಸ್ಯ ಪ್ರಜ್ಞೆ, ಸಮಯೋಚಿತ ಸಂಭಾಷಣೆ ಹೇಳುವ ಶೈಲಿ ಬಹಳ ಸೊಗಸು..

ಅಣ್ಣಾವ್ರು ತುಂಟ ಪಾತ್ರಗಳನ್ನೂ ಕೂಡ ಲೀಲಾಜಾಲಾವಾಗಿ ಮಾಡುತಿದ್ದರು..ನಡಿಗೆ, ನಾಟ್ಯ, ವೇಷ ಭೂಷಣ..ಎಲ್ಲವು ಸೊಗಸು...ಮಗುವಿನ ಹಾಗೆ...


ಅದಕ್ಕೆ ಅಲ್ಲವೇ ಅವರು ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಹಾಡಿದ್ದು..



ಎಂಥ ಸೊಗಸು ಮಗುವಿನ ಮನಸು...

Sunday, February 26, 2012

ಶಂಖನಾದ - ತಮಾಷೆ ಮಾಡುತ್ತಾ ಗಬ್ಬು ರಾಜಕೀಯ ಹೂರಣವನ್ನ ಹೊರಗಿಡುವ ಚಿತ್ರ (1986)

ಅತ್ಯಂತ ಕಡಿಮೆ ಖರ್ಚಿನಲ್ಲಿ ಸರಿಯಾದ ತಲೆ ಉಪಯೋಗಿಸಿ ಒಳ್ಳೆಯ ಕತೆಯನ್ನ ಅಷ್ಟೇ ಚೊಕ್ಕವಾಗಿ ಮಾಡಿದರೆ ಒಂದು ಉತ್ತಮ ಕಲಾಕೃತಿ ಬರುತ್ತೆ..ಈ ಮಾತಿಗೆ ಸಾಕ್ಷಿ "ಶಂಖನಾದ"  ಕನ್ನಡ ಚಲನ ಚಿತ್ರ..


ಉಮೇಶ್ ಕುಲಕರ್ಣಿಯವರ ಸರಳ ನಿರೂಪಣೆ, ಎ.ಎಸ. ಮೂರ್ತಿಯವರ ಸುಲಲಿತ ಸಂಭಾಷಣೆ (ಕೆಲವು ಕಡೆ ಅತಿ ಎನ್ನಿಸಿದರೂ) ಸಂದರ್ಭಕ್ಕೆ ಸರಿ ಹೊಂದುತ್ತೆ..


ಹಳ್ಳಿ ರಾಜಕೀಯ ಬೆಳವಣಿಗೆಯನ್ನ ಯಾವ ರೀತಿ ತುಳಿಯುತ್ತದೆ, ಒಳ್ಳೆ ಮನಸಿರುವ ಕೈಗಳನ್ನ ಹೇಗೆ ಕಾಡುತ್ತದೆ ಎನ್ನುವುದನ್ನ ಹಾಸ್ಯ ಮಿಶ್ರಿತ ದೃಶ್ಯಗಳಲ್ಲಿ ತೂಗಿಸಿಕೊಂಡು ಹೋಗುತ್ತದೆ..


೧೯೮೬ರಲ್ಲಿ ತೆರೆಕಂಡ ಈ ಚಿತ್ರದ ನಿಜವಾದ ನಾಯಕ ಕಥೆ ಹಾಗು ಸಂಭಾಷಣೆ.  ನಂತರದ ನಾಯಕ ಅರವಿಂದ್. ಇವರು ಅನುಭವ ಅರವಿಂದ್ ಅಂತಾನೆ ಪ್ರಸಿದ್ದಿ. ಅವರ ವೃತ್ತಿ ಬದುಕಿನಲ್ಲಿ  ಒಂದು ಅಪರೂಪದ ಚಿತ್ರ. ಅವರ ಪ್ರತಿಯೊಂದು ಮುಖಾಭಿನಯ, ಸಂಭಾಷಣೆ ಹೇಳುವ ಶ್ಯಲಿ ನಿಜಕ್ಕೂ ನಗೆ ಬುಗ್ಗೆ ಸುರಿಯುತ್ತೆ..


ಹಳ್ಳಿ ಪ್ರಮುಖ ಇಬ್ಬರು ಗೌಡರ ಪಾತ್ರದಲ್ಲಿ ವಜ್ರಪ್ಪ, ಹಾಗು ಆಂಜನಪ್ಪ ಕ್ರೌರ್ಯದ ಮುಖ ತೋರಿಸುತ್ತಲೇ, ಅವರ ಸಂಭಾಷಣೆಗಳು ನಗೆ ಹುಟ್ಟಿಸುತ್ತದೆ.


ಅಭಿನಯ ಅವರ ಅಭಿನಯ ಹಳ್ಳಿತನವನ್ನು, ಮುಗ್ದತೆಯನ್ನ ತೋರಿಸುತ್ತದೆ..


ಇನ್ನು ಬಸಕ್ಕನ ಪಾತ್ರಧಾರಿ ಮಹಿಮಾ ಪಟೇಲ್ ಮಹಾ ಮಹಿಮೆಯನ್ನೇ ತೋರಿಸುತ್ತಾರೆ..ಅವರ ಪಾತ್ರ ಸಿನಿಮಾದ ಕೊನೆ ಅಂಚಿನಲ್ಲಿ ಬರುತ್ತದೆ..ಆದ್ರೆ ನೆನಪಿನಲ್ಲಿ ಉಳಿಯುತ್ತೆ..


ಕತೆಗೆ ಮುಖ್ಯ ತಿರುವು ಕೊಡುವ ಪಾತ್ರದಲ್ಲಿ ರಮೇಶ್ ಭಟ್ ಗಮನ ಸೆಳೆಯುತ್ತಾರೆ.


ಕತೆಯ ತಿರುಳು ಇಷ್ಟೇ..ಹಳ್ಳಿ ಪಂಚಾಯತಿ ಕಛೇರಿಗೆ ಅಧ್ಯಕ್ಷ ಸ್ಥಾನಕ್ಕೆ ೧೧ ಸ್ಥಾನಗಳಿಗೆ ಚುನಾವಣೆ ನಡೆಯುತ್ತೆ..ಇಬ್ಬರು ಗೌಡರ ಎರಡು ಪಕ್ಷಗಳು ತಲಾ ಐದು ಸ್ಥಾನಗಳು ಸಿಗುತ್ತದೆ, ಉಳಿದ ಒಂದು ಸ್ಥಾನವನ್ನ ಹಿಂದುಳಿದ ಜಾತಿಗೆ ಸೇರಿದ ದಾಸಯ್ಯ (ಅರವಿಂದ್) ಗಳಿಸುತ್ತಾರೆ.  ಚುನಾವಣಾಧಿಕಾರಿ ಯಾರಿಗೂ ಸ್ಪಷ್ಟ ಬಹುಮತ ಇಲ್ಲದ ಕಾರಣ ದಾಸಯ್ಯ ಯಾರ ಪಕ್ಷಕ್ಕೆ ಸೇರುತ್ತಾನೋ ಅವರ ಪಕ್ಷವೇ ಅಧಿಕಾರಕ್ಕೆ ಬರುತ್ತೆ ಅಂತ ಹೇಳುತ್ತಾರೆ.  ಅವಾಗ ಶುರುವಾಗುತ್ತೆ ದಾಸಯ್ಯನ ಗೋಳು.


ಕೆಲವು ಸಂಭಾಷಣೆಗಳು :
೧. ಒಬ್ಬ ಕೆಲಸ ಮಾಡಿದರೆ ಬಾಯಿ ಬಡ್ಕೊತಾನೆ, ಇನ್ನೊಬ್ಬ ಮಾಡದಿದ್ದರೆ ಅಂಡು    ಬಡ್ಕೊತಾನೆ
2. ದಾಸಯ್ಯ, ಬಸಕ್ಕ ಚುನಾವಣೆಗೆ ನಿಲ್ಲುತ್ತಾರೆ ಅನ್ನುವ ಸುದ್ದಿ ಬಿದ್ದಾಗ ಒಬ್ಬ ಗೌಡ ಹೇಳುವ ಮಾತು "ತುಪ್ಪದ ಕೊಡದ ಮೇಲೆ ಕೂತಿರೋ ಇಲಿ, ಬಿಡೊಂಗೂ ಇಲ್ಲ, ಬಡಿಯೊಂಗೂ ಇಲ್ಲ.."
೩. ದಾಸಯ್ಯ ಮತ್ತು ಬಸಕ್ಕನ ಬಗ್ಗೆ ಗೌಡರು ಹೇಳುವ ಮಾತು "ಇವನು ಉಪ್ಪಿಲ್ಲದೇ ಹುರಿತಾನೆ, ಅವಳು ಎಣ್ಣೆ ಇಲ್ಲದೆ ಮೆರಿತಾಳೆ 
೪. ಇವಳು ದುಡ್ಡು ಕೊಟ್ಟರೆ ಧೂಪ ಹಾಕ್ತಾಳೆ, ಕಾಸು ಕೊಟ್ಟರೆ ಕೈಲಾಸ ತೋರಿಸ್ತಾಳೆ
೫. ದಾಸಯ್ಯ ಬಸಕ್ಕನಿಗೆ ನೀನು ಜನ ಸೇವೆ ಮಾಡು ಅಂತ ಹೇಳಿದಾಗ "ದಾಸಯ್ಯ, ಹತ್ತು ವರ್ಷದಿಂದ ಈ ಇಬ್ಬರ ಗೌಡರ ಸೇವೆ ಮಾಡಿ ಸಾಕಾಗಿ ಹೋಗಿದೆ,  ಇನ್ನು ಜನಗಳ ಸೇವೆ ನನಗೊಬ್ಬಳಿಗೆ ಆಗೋಲ್ಲ :-)
೬. ದೀಪ ನುಂಗೋ ದಾಸಯ್ಯ, ದೀವಟಿಗೆ ನುಂಗೋ ಬಸಕ್ಕ
೭. ಚುನಾವಣಾಧಿಕಾರಿ  ಹಳ್ಳಿಯಲ್ಲಿ ಹೆಣ್ಣು ಮಗಳನ್ನು ಚುನಾವಣೆಗೆ ನಿಲ್ಲಸಬೇಕು ಯಾಕೆ ಅಂದ್ರೆ ಅವಳು ವೀಕರ್  ಸೆಕ್ಸ್ ಅಂದ್ರೆ ದುರ್ಬಲ ಲಿಂಗ ಅಂತ ಹೇಳ್ತಾನೆ ಅದಕ್ಕೆ ಗೌಡ ಹೇಳುವ ಮಾತು..."ಅವಳು ಎಂಥ ಸ್ವಾಮಿ ದುರ್ಬಲ ಲಿಂಗ!!, ನಮ್ಮೂರಲ್ಲಿ ಇರುವ ಶಕ್ತಿಶಾಲಿ ಲಿಂಗ ಅವಳು"
೮. ಒಬ್ಬ ಗೌಡ ಬಂದು ಬಸಕ್ಕನಿಗೆ ನೀನು ನಿಂತ್ಕೋಬೇಕು  (ಚುನಾವಣೆಗೆ) ಅಂತ ಹೇಳಿದಾಗ ಅವಳು "ಏನಾತು ಗೌಡ್ರೆ..ದಿನಾಲು ಮಲಕ್ಕೋ,. ಮಗ್ಗಾಲಾಗು ಅಂತ ಹೇಳ್ತಾ ಇದ್ದೋರು .ಇವತ್ತೇನೋ ನಿಂತ್ಕೋ ಅಂತ ಹೇಳ್ತಾ ಇದ್ದೀರಾ?!"
೯. ಇನ್ನೊಬ್ಬ ಗೌಡ ನಿನಗೆ ಚೇರ್-ಮ್ಯಾನ್ ಖುರ್ಚಿ ಬೇಡ ಅಂತ ಬಸಕ್ಕನಿಗೆ  ಹೇಳಿದಾಗ ಅವಳು "ಏನಿದು ಗೌಡ್ರೆ, ಕಳೆದ ಹತ್ತು ವರ್ಷದಿಂದ ನೀವು ಕೇಳಿದಾಗೆಲ್ಲ ಕಾಲು ಕೊಡ್ತಾ ಇದ್ದೆ...ನೀವು ಆ ನಾಲ್ಕು ಕಾಲಿನ ಖುರ್ಚಿ ಕೊಡೋಲ್ಲ ಅಂತ ಹೇಳ್ತ್ಹಿರಲ್ಲ"


ಇವೆಲ್ಲ ಕೆಲವು ತುಣುಕುಗಳು...ಇಡಿ ಸಿನಿಮಾದಲ್ಲಿ ಇಂತಹ ಅನೇಕ ಸಂಭಾಷಣೆಗಳು ಇದ್ದಾವೆ...ನೋಡಿ ಖುಷಿ ಪಡಿ.

Sunday, February 12, 2012

ಲೋಕನಾಥ್ ಸಿನಿ ನಟ - ಅರವತ್ತೆರಡು ವಿವಾಹ ಮಹೋತ್ಸವ (2012)

http://www.prajavani.net/web/include/story.php?news=6528&section=54&menuid=13

ಲೋಕನಾಥ್ ಸಿನಿ ನಟ ಒಬ್ಬ ಕಲಾವಿದರು ...ಅವರಲ್ಲಿ ತುಂಬಿರುವ ಪ್ರತಿಭೆ ಅವರ ಎತ್ತರಕಿಂತಲೂ ಎತ್ತರ...
ಅರವತ್ತೆರಡು ವಿವಾಹ ಮಹೋತ್ಸವ ಆಚರಿಸುತ್ತಿರುವ ಈ ದಂಪತಿಗಳಿಗೆ ಕನ್ನಡ ಚಲನಚಿತ್ರ ವೀಕ್ಷಕರ ಪರವಾಗಿ ಒಂದು ಲೇಖನ..

ಲೋಕನಾಥ್ ಅಂದ ಕೂಡಲೇ ಕಣ್ಣ ಮುಂದೆ ಬರುವುದು ಉಪ್ಪಿನಕಾಯಿ ದೃಶ್ಯ - ಭೂತಯ್ಯನ ಮಗ ಅಯ್ಯು ಚಿತ್ರದಲ್ಲಿ...ದೃಶ್ಯಗಳು ಎರಡು ಮೂರೇ ಇದ್ದರು ಪರಿಣಾಮಕಾರಿಯಾಗಿ ಮನದಲ್ಲಿ ಛಾಪು ಒತ್ತಿದೆ.. ಅದರಲ್ಲೂ ಕಡೆ ದೃಶ್ಯದಲ್ಲಿ ಹೇಳುವ ಸಂಭಾಷಣೆ "ಅಯ್ಯನೋರ ಎಲ್ಲರು ನಿಮ್ಮ ಮನೆಯಿಂದ ಕದ್ದು ಕೊಂಡು ಹೋಗಿದ್ದನ್ನ ತಿರುಗಿ ಕೊಟ್ಟರು..ಆದ್ರೆ ನಾನು ಕೊಡೋಕೆ ಆಗೋಲ್ಲ...ಯಾಕೆ ಅಂದ್ರೆ ನಿಮ್ಮ ಮನೆ ಉಪ್ಪಿನಕಾಯಿ ಬಹಳ ರುಚಿ..ಅದಕ್ಕೆ ಸಾರು ಕುಡಿದ ಹಾಗೆ ಕುಡಿದು ಬಿಟ್ಟೆ..ಕ್ಷಮಿಸಿ ಅಯ್ಯನೋರ".ಈ ಸಂಭಾಷಣೆ ಹೇಳುವಾಗ ಅವರ ಮುಖದಲ್ಲಿ, ಹಾಗು ಧ್ವನಿಯಲ್ಲಿ ಸಿಗುವ ಮುಗ್ದತೆ ನಿಜಕ್ಕೂ ಅವರ್ಣನೀಯ ..

ದ್ವಾರ್ಕಿ-ವಿಷ್ಣು  ಜೋಡಿಯಲ್ಲಿ ಬಂದ ಅನೇಕ ಚಿತ್ರಗಳಲ್ಲಿ ಇವರ ಅಭಿನಯ ನಗೆ ಬುಗ್ಗೆ ಉಕ್ಕಿಸುತ್ತದೆ...ಕಿಟ್ಟು-ಪುಟ್ಟು, ಸಿಂಗಪೂರನಲ್ಲಿ ರಾಜ ಕುಳ್ಳ, ಮನೆ ಮನೆ ಕಥೆ, ಗುರು ಶಿಷ್ಯರು,  ಹೀಗೆ ಹಲವಾರು ಸಿನೆಮಾದಲ್ಲೂ ಅಭಿನಯ ಗಮನ ಸೆಳೆಯುತ್ತದೆ..

ನಾಗರಹಾವು, ಒಲವಿನ ಕಾಣಿಕೆ, ಅರುಣ ರಾಗ, ಬಂಗಾರದ ಪಂಜರ, ಮುಂತಾದ ಅನೇಕ ಚಿತ್ರಗಳಲ್ಲಿ ಅವರ ಕಂಚಿನ ಕಂಠದ ಮಾತುಗಳು, ಅಭಿನಯ ಬಲು ಸೊಗಸು

ಅವರ ಇನ್ನೊಂದು ಸುಂದರ ಅಭಿನಯದ ಸಿನಿಮಾ "ಮಿಂಚಿನ ಓಟ" ಶಂಕರ ನಾಗ್ ಅದ್ಭುತ ಚಿತ್ರ.  ಅದರಲ್ಲಿ ಕಳ್ಳರ ಪಾತ್ರದಲ್ಲಿ ಶಂಕರ್, ಅನಂತ್ ಜೊತೆಗೆ ಇವರು ಸೊಗಸಾಗಿ ಅಭಿನಯಿಸಿದ್ದಾರೆ..

ಇಂತಹ ಅಪರೂಪದ ಕಲಾವಿದ ಎಂಬತ್ತೆರಡು ವಸಂತಗಳನ್ನು ಪೂರೈಸಿ ಮುನ್ನೆಡೆಯುತ್ತಿದ್ದಾರೆ ..ಅವರಿಗೆ ಆ ಭಗವಂತ ಅರೋಗ್ಯ, ನೆಮ್ಮದಿ, ಸುಖ, ಶಾಂತಿ ಹಾಗು ಬಹುಕಾಲ ದಾಂಪತ್ಯ ಜೊತೆ ನೀಡಲಿ ಅನ್ನುವ ಆಶಯದೊಂದಿಗೆ ಈ ಲೇಖನ ಮುಗಿಸುತ್ತಿದ್ದೇನೆ..

Monday, January 9, 2012

ದೇವರ ದುಡ್ಡು - ಭಗವದ್ಗೀತೆ ಕೊಡುವ ಭಾವ ಎರಡು ಘಂಟೆಗಳ ಕಾಲದಲ್ಲಿ (1976)

ದೇವರ  ದುಡ್ಡು 



ಒಂದು ಸುಂದರವಾದ ಕಥೆಯನ್ನು  ಎಷ್ಟು ಚೆನ್ನಾಗಿ ಯಾವ ಭಾಷೆಯಲ್ಲಾದರು  ಸರಿ ಚಿತ್ರಿಸಬಹುದು ಎನ್ನುವದಕ್ಕೆ ಅತ್ಯುತ್ತಮ ಉದಾಹರಣೆ ಈ ಸಿನಿಮಾ...


ಮೊದಲ ಪುಟದಲ್ಲೇ ಈ ಸಿನಿಮಾ ಗಮನ ಸೆಳೆಯುತ್ತದೆ. ಎಲ್ಲರ ಕಲಾವಿದರ, ತಂತ್ರಜ್ಞರ ಹೆಸರು ತೋರಿಸುವದರ ಬದಲು ಇದು ಕೆ.ಎಸ.ಎಲ್. ಸ್ವಾಮಿ ಚಿತ್ರತಂಡದಿಂದ ಎನ್ನುವುದು ಖುಷಿಕೊಡುತ್ತದೆ.


ಎಲ್ಲರು ಒಂದೇ ಅನ್ನುವ ಭಾವ ಬಂದ್ರೆ ಅದರ ಚೌಕಟ್ಟು ಕೂಡ ಸುಂದರವಾಗಿ ಇರುತ್ತದೆ.


ಈ ಸಿನಿಮಾ ಆಹಾ ಓಹೋ ಅನ್ನುವ ಮಟ್ಟಕ್ಕಿಂತ ಮೇಲೆ ನಿಲ್ಲುತ್ತದೆ. ಸಮಗ್ರ ಭಗವದ್ಗೀತೆ ಕೊಡುವ ಭಾವವನ್ನು ಸುಮಾರು ಎರಡು ಘಂಟೆಗಳ ಕಾಲದಲ್ಲಿ ಕೊಡುವ ಶಕ್ತಿ ಈ ಚಿತ್ರದಲ್ಲಿದೆ ಎನ್ನುವುದು ಇದರ ಹೆಗ್ಗಳಿಕೆ.


ಉತ್ತಮ ಸಂಭಾಷಣೆ, ಉತ್ತಮ ಹಾಡುಗಳು, ಸಂಗೀತ ಮನಸು ಸೆಳೆಯುತ್ತದೆ.

  • ರಾಜೇಶ್ ಅವರ ವೃತ್ತಿ ಜೀವನದ ಒಂದು ಮೈಲಿಗಲ್ಲು ಎನ್ನಬಹುದು. ಸುಲಲಿತವಾದ ನಟನೆ, ಸಂಭಾಷಣೆ ಹೇಳುವ ಧಾಟಿ, ಆಂಗಿಕ ಅಭಿನಯ ಎಲ್ಲವು ಅತಿ ಸುಂದರ.
  • ಶ್ರೀನಾಥ್ ಕೃಷ್ಣನಾಗಿ ಉತ್ತಮ ಅಭಿನಯ, ತಾಳಬದ್ದವಾದ ಸಂಭಾಷಣೆ, ಏರಿಳಿತ, ಹದವಾದ ಧಾಟಿಯಲ್ಲಿ ಮುಟ್ಟಿಸಬೇಕಾದ ವಿಷಯವನ್ನು ಹೇಳುವ ಚತುರತೆ ಎಲ್ಲವು ಅಭಿನಯದಲ್ಲಿ ಮೇಳೈಸಿದೆ.
  • ರಾಜೇಶ್ ಮತ್ತು ಶ್ರೀನಾಥ್ ಇಬ್ಬರು ನಡೆಸುವ ಜುಗಲ್-ಬಂದಿ ಇಡಿ ಚಿತ್ರದ ಅತ್ಯುತ್ತಮ ದೃಶ್ಯಗಳು
  • ಜಯಂತಿಯ  ಪ್ರೌಡ ಅಭಿನಯ, ಆ ವಯಸ್ಸಿನಲ್ಲೂ ಮುದ್ದಾಗಿ, ಅಮ್ಮನಾಗಿ ತೋರುವ ಅಭಿನಯ ಮನಸನ್ನು ಸೂರೆಗೊಳ್ಳುತ್ತದೆ
  • ಎಡಕಲ್ಲು ಗುಡ್ಡದ ಚಂದ್ರಶೇಖರ್ ಆ ಸಿನಿಮಾದಲ್ಲಿ ಎಷ್ಟು ತುಂಟ, ಪುಂಡನಾಗಿ ಅಭಿನಯಿಸಿದ್ದರೋ ಇಲ್ಲಿ ಅಷ್ಟೇ ಸಂಯಮ ಅಭಿನಯ, ಅದರಲ್ಲೋ ಕಡೆಗೆ ಅವರ ತಾಯಿ ಪಾತ್ರದಾರಿ ಜಯಂತಿಗೆ ಹೇಳುವ "ಅಮ್ಮ, ದೇವರು ನನಗೆ ಸಿಕ್ಕರೆ"  ಜಯಂತಿ ಹೇಳುತ್ತಾರೆ "ಅಪ್ಪನಿಗೆ ಬೇಗ ಕಾಯಿಲೆ ವಾಸಿ ಮಾಡು ಅಂತ ಕೆಳ್ಕೊತೀಯೇನೋ" ಅಂದಾಗ ಚಂದ್ರು ಹೇಳುವ ಮಾತು "ಅಮ್ಮ ಅದಕ್ಕೆ ನೀನು ಇದ್ದೀಯ...ಪ್ರತಿ ಜನುಮದಲ್ಲೋ ನೀನೆ ನನ್ನ ತಾಯಿಯಾಗಿರು ಅಂತ ಕೆಳ್ಕೊತೀನಿ" ಅಂತ ಹೇಳಿದಾಗ ಕಣ್ಣಂಚಲಿ ಭಾಷ್ಪ ಜಿನುಗತ್ತದೆ 
  • ಬಾಲಣ್ಣ ಗಮನಸೆಳೆಯುತ್ತಾರೆ. ಬಾಲಣ್ಣ-ರಾಜೇಶ್ ಇಬ್ಬರು ಇರುವ ದೃಶ್ಯಗಳು ಖುಷಿಕೊಡುತ್ತದೆ
  • ಪಿ. ಬಿ.ಎಸ. "ನಾನೇ ಎಂಬ ಭಾವ" ಹಾಡಿನಲ್ಲಿ ಒಳಗಿನ ಕಣ್ಣು ತೆರೆಸಿದರೆ, ಎಸ.ಪಿ.ಬಿ. "ತರಿ ಕೆರೆ ಏರಿ ಮೇಲೆ " ಹಾಡಿನಲ್ಲಿ  ನಮ್ಮ ದೇಹವನ್ನು ಕುಣಿಸುತ್ತಾರೆ.  http://www.youtube.com/watch?v=T3fsV5yUeVg
  • ರಾಜನ್-ನಾಗೇಂದ್ರ ಅವರ ಸಂಗೀತ ಪ್ರತಿ ದೃಶ್ಯವನ್ನು ಕಾವ್ಯವನ್ನಾಗಿ ಮಾಡಿದ್ದಾರೆ
ನನ್ನ ಅಪ್ಪನಿಗೆ ತುಂಬಾ ಪ್ರಿಯಾವಾದ ಸಿನಿಮಾ. ನಾನು ಎಷ್ಟು ಬಾರಿ ನೋಡಿದ್ದೇನೋ ನನಗೆ ಗೊತ್ತಿಲ್ಲ..ಪ್ರತಿ ಬಾರಿ ನೋಡಿದಾಗಲು ಹೊಸ ಅನುಭವ ಕೊಡುವಂತ ಉತ್ತಮ ಚಿತ್ರಕೊಟ್ಟ ಕೆ.ಎಸ.ಎಲ್ ಸ್ವಾಮಿ ತಂಡಕ್ಕೆ ನನ್ನ ನಮನಗಳು