Sunday, February 12, 2012

ಲೋಕನಾಥ್ ಸಿನಿ ನಟ - ಅರವತ್ತೆರಡು ವಿವಾಹ ಮಹೋತ್ಸವ (2012)

http://www.prajavani.net/web/include/story.php?news=6528&section=54&menuid=13

ಲೋಕನಾಥ್ ಸಿನಿ ನಟ ಒಬ್ಬ ಕಲಾವಿದರು ...ಅವರಲ್ಲಿ ತುಂಬಿರುವ ಪ್ರತಿಭೆ ಅವರ ಎತ್ತರಕಿಂತಲೂ ಎತ್ತರ...
ಅರವತ್ತೆರಡು ವಿವಾಹ ಮಹೋತ್ಸವ ಆಚರಿಸುತ್ತಿರುವ ಈ ದಂಪತಿಗಳಿಗೆ ಕನ್ನಡ ಚಲನಚಿತ್ರ ವೀಕ್ಷಕರ ಪರವಾಗಿ ಒಂದು ಲೇಖನ..

ಲೋಕನಾಥ್ ಅಂದ ಕೂಡಲೇ ಕಣ್ಣ ಮುಂದೆ ಬರುವುದು ಉಪ್ಪಿನಕಾಯಿ ದೃಶ್ಯ - ಭೂತಯ್ಯನ ಮಗ ಅಯ್ಯು ಚಿತ್ರದಲ್ಲಿ...ದೃಶ್ಯಗಳು ಎರಡು ಮೂರೇ ಇದ್ದರು ಪರಿಣಾಮಕಾರಿಯಾಗಿ ಮನದಲ್ಲಿ ಛಾಪು ಒತ್ತಿದೆ.. ಅದರಲ್ಲೂ ಕಡೆ ದೃಶ್ಯದಲ್ಲಿ ಹೇಳುವ ಸಂಭಾಷಣೆ "ಅಯ್ಯನೋರ ಎಲ್ಲರು ನಿಮ್ಮ ಮನೆಯಿಂದ ಕದ್ದು ಕೊಂಡು ಹೋಗಿದ್ದನ್ನ ತಿರುಗಿ ಕೊಟ್ಟರು..ಆದ್ರೆ ನಾನು ಕೊಡೋಕೆ ಆಗೋಲ್ಲ...ಯಾಕೆ ಅಂದ್ರೆ ನಿಮ್ಮ ಮನೆ ಉಪ್ಪಿನಕಾಯಿ ಬಹಳ ರುಚಿ..ಅದಕ್ಕೆ ಸಾರು ಕುಡಿದ ಹಾಗೆ ಕುಡಿದು ಬಿಟ್ಟೆ..ಕ್ಷಮಿಸಿ ಅಯ್ಯನೋರ".ಈ ಸಂಭಾಷಣೆ ಹೇಳುವಾಗ ಅವರ ಮುಖದಲ್ಲಿ, ಹಾಗು ಧ್ವನಿಯಲ್ಲಿ ಸಿಗುವ ಮುಗ್ದತೆ ನಿಜಕ್ಕೂ ಅವರ್ಣನೀಯ ..

ದ್ವಾರ್ಕಿ-ವಿಷ್ಣು  ಜೋಡಿಯಲ್ಲಿ ಬಂದ ಅನೇಕ ಚಿತ್ರಗಳಲ್ಲಿ ಇವರ ಅಭಿನಯ ನಗೆ ಬುಗ್ಗೆ ಉಕ್ಕಿಸುತ್ತದೆ...ಕಿಟ್ಟು-ಪುಟ್ಟು, ಸಿಂಗಪೂರನಲ್ಲಿ ರಾಜ ಕುಳ್ಳ, ಮನೆ ಮನೆ ಕಥೆ, ಗುರು ಶಿಷ್ಯರು,  ಹೀಗೆ ಹಲವಾರು ಸಿನೆಮಾದಲ್ಲೂ ಅಭಿನಯ ಗಮನ ಸೆಳೆಯುತ್ತದೆ..

ನಾಗರಹಾವು, ಒಲವಿನ ಕಾಣಿಕೆ, ಅರುಣ ರಾಗ, ಬಂಗಾರದ ಪಂಜರ, ಮುಂತಾದ ಅನೇಕ ಚಿತ್ರಗಳಲ್ಲಿ ಅವರ ಕಂಚಿನ ಕಂಠದ ಮಾತುಗಳು, ಅಭಿನಯ ಬಲು ಸೊಗಸು

ಅವರ ಇನ್ನೊಂದು ಸುಂದರ ಅಭಿನಯದ ಸಿನಿಮಾ "ಮಿಂಚಿನ ಓಟ" ಶಂಕರ ನಾಗ್ ಅದ್ಭುತ ಚಿತ್ರ.  ಅದರಲ್ಲಿ ಕಳ್ಳರ ಪಾತ್ರದಲ್ಲಿ ಶಂಕರ್, ಅನಂತ್ ಜೊತೆಗೆ ಇವರು ಸೊಗಸಾಗಿ ಅಭಿನಯಿಸಿದ್ದಾರೆ..

ಇಂತಹ ಅಪರೂಪದ ಕಲಾವಿದ ಎಂಬತ್ತೆರಡು ವಸಂತಗಳನ್ನು ಪೂರೈಸಿ ಮುನ್ನೆಡೆಯುತ್ತಿದ್ದಾರೆ ..ಅವರಿಗೆ ಆ ಭಗವಂತ ಅರೋಗ್ಯ, ನೆಮ್ಮದಿ, ಸುಖ, ಶಾಂತಿ ಹಾಗು ಬಹುಕಾಲ ದಾಂಪತ್ಯ ಜೊತೆ ನೀಡಲಿ ಅನ್ನುವ ಆಶಯದೊಂದಿಗೆ ಈ ಲೇಖನ ಮುಗಿಸುತ್ತಿದ್ದೇನೆ..

No comments:

Post a Comment